ಬೆಂಗಳೂರಿನಿಂದ ಮೂರು ಪ್ರಮುಖ ನಗರಗಳಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸುವ ಪ್ರಕ್ರಿಯೆ ಆರಂಭಗಾಗಿದೆ. ಈ ಮಾಹಿತಿಯನ್ನು ಕೇಂದ್ರೀಯ ರೈಲು ಮಂತ್ರಿ ಪೀಯುಷ್ ಗೊಯಲ್ ತಿಳಿಸಿದರು.
ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಅತ್ಯಾಧುನಿಕ ರೈಲು “ಟ್ರೈನ್-೧೮”ಅನ್ನು “ವಂದೇ ಭಾರತ್ ಎಕ್ಸ್ಪ್ರೆಸ್” ಎಂದು ಮರುಹೆಸರಿಸಲಾಗಿದೆ. ಈಗ ಇದನ್ನು ಬೆಂಗಳೂರು-ಮಂಗಳೂರು, ಬೆಂಗಳೂರು-ಹೈದರಾಬಾದ್, ಹಾಗೂ ಬೆಂಗಳೂರು-ಚೆನ್ನೈ ನಡುವೆ ಓಡಿಸುವ ಪ್ರಕ್ರಿಯೆ ಆರಂಭವಾಗಿದೆ.
ಈ ರೈಲು ಪ್ರಮುಖ ನಗರಗಳ ಸಂಪರ್ಕ ಕೊಂಡಿಯಾಗಲಿದೆ. ಈ ರೈಲು ಓಡುವ ಮಾರ್ಗಗಳಲ್ಲಿ ಜಾಗತಿಕ ಗುಣಮಟ್ಟದ, ಇಲ್ಲೇ ತಯಾರಿಸಲಾದ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯಿರಲಿದೆ.
ಈ ರೈಲು ಸದ್ಯಕ್ಕೆ ಹೊಸ ದೆಹಲಿ-ವಾರಾಣಸಿ ನಡುವೆ ಸಂಚರಿಸುತ್ತಿದೆ. “ವಂದೇ ಭಾರತ್ ಎಕ್ಸ್ಪ್ರೆಸ್” ತಾಸಿಗೆ ೧೮೦-೨೦೦ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಈ ರೈಲಿನಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ. ಶತಾಬ್ದಿ ಎಕ್ಷ್ಪ್ರೆಸ್ಗೆ ಪರ್ಯಾಯವಾಗಿ ಈ ರೈಲುಗಳನ್ನು ಓಡಿಸುವ ಚಿಂತನೆಯೂ ಇದೆ.
ಇನ್ನು ಆರು ತಿಂಗಳಲ್ಲಿ ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಅಳವಡಿಸಲಾಗುವುದು ಎಂದು ಗೊಯಲ್ ಹೇಳಿದರು.
ಸಿಬಿನ್ ಪನಯಿಲ್ ಸೊಮನ್
ಉತ್ಪನ್ನ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು, ಇಂಡ್ಸಮಾಚಾರ್
