“ಅಮೇಠಿ ಸಂಸದೀಯ ಕ್ಷೇತ್ರದ ಜನರು ಹಲವಾರು ವರ್ಷ ಸುಮ್ಮನೆ ಕಣ್ಣುಮುಚ್ಚಿಕೊಂಡು ‘ಗಾಂಧಿ ಕುಟುಂಬ’ದವರನ್ನು ಗೆಲ್ಲಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಅವರಿಗೆ ಸಿಕ್ಕಿದ್ದೇನು? ಕೇವಲ ಉದಾಸೀನತೆ!”
“ಅಮೇಠಿಯ ಮತದಾರರು ‘ನಾಮದಾರ್’ ಕುಟುಂಬಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಪ್ರೀತಿ ನೀಡಿ, ಬೇಷರತ್ತಾಗಿ ನಂಬಿದ್ದಾರೆ. ಕುಟುಂಬವನ್ನು ಯಾವುದೇ ಕಾರಣಕ್ಕೂ ಪ್ರಶ್ನಿಸುತ್ತಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ಮೋದಿಯವರು “ಕ್ರೆಡೈ (CREDAI) ಯುತ್ ಐಕಾನ್ ೨೦೧೯” ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ, “ಇದೇ ಅಮೇಠಿಯಲ್ಲಿ ದಲಿತ್ ಬಸ್ತಿ ಇದೆ. ೧೦ ವರ್ಷಗಳ ಹಿಂದೆ ದಲಿತ್ ಬಸ್ತಿಯ ಜನರು ಸಂಸದ ಆವಾಸ್ ಯೋಜನೆಯಡಿ ಮನೆಗಳನ್ನು ಹೊಂದಿದರು. ಈ ಮನೆಗಳ ನಾಲ್ಕೂ ಗೋಡೆಗಳ ಮೇಲೆ ‘ಗಾಂಧಿ ಕುಟುಂಬ’ದವರ ಹೆಸರಗಳನ್ನು ಕೆತ್ತಲಾಗಿತ್ತು. ಅದರೆ ಇಂತಹ ಗೋಡಗಳು ಶಿಥಿಲಗೊಂಡು ನೆಲಕಚ್ಚಿದವು. ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಟ್ಟಲಾದ ಮನೆಗಳು ಹಿಂದಿನವುಗಳಿಗಿಂತಲೂ ದೊಡ್ಡದಾಗಿವೆ. ಇವುಗಳಿಗೆ ಶೌಚಾಲಯ, ಎಲ್ಪಿಜಿ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕವೂ ಇವೆ” ಎಂದು ಹೇಳಿದರು.
೨೦೨೨ರಷ್ಟರೊಳಗೆ ಮನೆ ಹೊಂದಿರದ ಪ್ತತಿಯೊಬ್ಬರೂ ಸಹ ಮನೆ ಹೊಂದುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ನರೇಂದ್ರ ಮೋದಿಯವರು ಹೇಳಿದರು.
