ದಿನಾಂಕ: ೨೬ ಜನವರಿ ೧೯೯೨, ರವಿವಾರ
ಸ್ಥಳ ಲಾಲ್ ಚೌಕ್, ಶ್ರೀನಗರ, ಜಮ್ಮು ಮತ್ತು ಕಾಶ್ಮೀರ
“ಯಾರಾದರೂ ಶ್ರೀನಗರದ ಲಾಲ್ ಚೌಕ್ಗೆ ಬಂದು ಭಾರತದ ರಾಷ್ಟ್ರ ಧ್ವಜ ಏರಿಸಿದಲ್ಲಿ, ಅವರು ಜೀವಂತರಾಗಿ ಮನೆ ಸೇರುವುದಿಲ್ಲ” ಎಂದು ಪಾಕಿಸ್ತಾನಿ ಭಯೋತ್ಪಾದಕರು ಬೆದರಿಕೆ ಹಾಕಿದ್ದರು.
ಪಾಕಿಸ್ತಾನಿ ಭಯೋತ್ಪಾದಕರ ಬೆದರಿಕೆಗೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳು ಬೆಂಬಲ ನೀಡಿದರು. ಆದರೆ ಭಾರತೀಯ ಜನತಾ ಪಕ್ಷದ ಇಬ್ಬರು ಧೀಮಂತ ವ್ಯಕ್ತಿಗಳು ಭಯೋತ್ಪಾದಕರ ಸವಾಲನ್ನು ಸ್ವೀಕರಿಸಿದರು. ಅವರು ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ ತಮ್ಮ ಪ್ರಯಾಣವನ್ನು ಆರಂಭಿಸಿ, ಜನವರಿ ೨೬ರಂದು ಬೆಳಿಗ್ಗೆ ಜಮ್ಮು ತಲುಪಿದರು. ಅಲ್ಲಿಂದ ಈ ಇಬ್ಬರು ವ್ಯಕ್ತಿಗಳು ಹೆಲಿಕಾಪ್ಟರ್ ಏರಿ ಶ್ರೀನಗರ ತಲುಪಿದರು. ೧೫ ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ, ಈ ಇಬ್ಬರು ಧೈರ್ಯವಂತರು ಭಾರತೀಯ ರಾಷ್ಟ್ರೀಯ ಧ್ವಜವನ್ನು ಏರಿಸಿ, ರಾಷ್ಟ್ರಗೀತೆ ಹಾಡುವುದರೊಂದಿಗೆ ಸಮಾರಂಭವನ್ನು ಸಂಪೂರ್ಣಗೊಳಿಸಿದರು.
ಭಾರತೀಯ ಜನತಾ ಪಕ್ಷದ ಈ ಇಬ್ಬರೂ ನಾಯಕರು, ಶ್ರೀನಗರದ ಲಾಲ್ ಚೌಕ್ನಲ್ಲಿ ಭಾರತದ ತ್ರಿವರ್ಣವನ್ನು ಏರಿಸುವ ಛಲವನ್ನು ಸಾಧಿಸಿಯೇಬಿಟ್ಟರು.
ಸಮಾರಂಭ ನಡೆಯುತ್ತಿರುವಾಗ, ಪಾಕಿಸ್ತಾನಿ ಭಯೋತ್ಪಾದಕರು ಐದು ಬಾಂಬ್ ಸಿಡಿಸಿದರು. ಆದರೆ ಧ್ವಜ ಏರಿಸುತ್ತಿದ್ದ ಈ ಇಬ್ಬರೂ ವ್ಯಕ್ತಿಗಳು ಕಿಂಚಿತ್ತೂ ವಿಚಲಿತರಾಗಲಿಲ್ಲ. ಸಮಾರಂಭ ಮುಗಿದೊಡನೆ, ಈ ಇಬ್ಬರೂ ಸಹ ಕಾರಿನ ತನಕ ನಡೆದು, ಆ ಕಾರಲ್ಲಿ ಕುಳಿತು, ಹೆಲಿಕಾಪ್ಟರ್ ತನಕ ಹೋದರಲ್ಲದೆ, ಸುರಕ್ಷಿತವಾಗಿ ಮನೆ ಸೇರಿದರು.
ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್ಪಿಎಫ್ನ ೪೫ ಯೋಧರ ಬಗ್ಗೆ ಈ ವ್ಯಕ್ತಿ ಸುಮ್ಮನಿರುತ್ತಾರೆ ಎಂದುಕೊಂಡಿರಾ? ನೀವು ಆ ತರಹ ಯೋಚಿಸಿದಲ್ಲಿ ನಿಮಗೆ ಚಿಕಿತ್ಸೆ ನೀಡಬೇಕಾದೀತು!
ಈ ಇಬ್ಬರು ವ್ಯಕ್ತಿಗಳು ಬೇರಾರೂ ಅಲ್ಲ, ಮುರಳಿ ಮನೋಹರ ಜೋಶಿ ಮತ್ತು ನರೇಂದ್ರ ಮೋದಿ. ಶ್ರೀನಗರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಏರಿಸಿ, ರಾಷ್ಟ್ರಗೀತೆ ಹಾಡಿ, ತಮ್ಮ ಕಾರಿನ ತನಕ ನಡೆದ ವ್ಯಕ್ತಿಯೇ ನರೇಂದ್ರ ಮೋದಿ – ಭಾರತದ ಇಂದಿನ ಪ್ರಧಾನ ಮಂತ್ರಿ.
ತಾಳ್ಮೆಯಿರಲಿ. ಎದೆಯಲ್ಲಿ ಕಿಚ್ಚು ನಮಗಿಂತಲೂ ಅವರಲ್ಲಿ ಹೆಚ್ಚಿದೆ.
