ಕನ್ನಡ

ಕರುನಾಡಿನಲ್ಲಿ ನಕಲಿ ಕಾಫಿ ಟೀ ಪುಡಿ ಧಂಧೆ!

ಪ್ರಾಣಿಗಳ ಲದ್ದಿ ಬೆಳೆಸಿ ಕಾಫಿ ಟೀ ಪುಡಿ ಮಾಡಲಾಗುತ್ತಿದೆ.

ಬಿಸಾಡಿರುವ ಟೀ ಪುಡಿಗೆ ಕ್ಯಾನ್ಸರ್ ಕಾರಕ ಬಣ್ಣ ಬೆರೆಸುತ್ತಿದ್ದಾರೆ.

ಕಿಕ್‌, ಮತ್ತು ಬರಿಸುವಂತಹ ಪದಾರ್ಥ ಹಾಕಿ ಬೆರೆಸುತ್ತಿದ್ದಾರೆ.

ನಕಲಿ ಟೀ ಅಂಗಡಿಗಳ ಸಾಲು

ವಿಜಯಲಕ್ಷ್ಮಿ ಶಿಬೆರೂರು, ಗಗನ್ ಗೌಡ, ರಂಜಿತ್ ಕುಮಾರ್ ಇವರುಗಳನ್ನು ಒಳಗೊಂಡ ನ್ಯೂಸ್‌೧೮ ಕನ್ನಡ ತಂಡವು ಒಂದು “ಸ್ಟಿಂಗ್” ಕಾರ್ಯಾಚರಣೆ ನಡೆಸಿತು.  ಸಂವಾದ ಹೀಗೆ ನಡೆಯಿತು:

ನ್ಯೂಸ್‌ ೧೮ ಕನ್ನಡ: ೧೫೦ ಕೆಜಿ ಟೀ ಬೇಕು.
ನಕಲಿ ಟೀ ಪುಡಿ ಮಾರಾಟಗಾರ: ೧ ಟನ್ ಬೇಕಾದ್ರೂ ಕೊಡ್ತೀನಿ ಆದ್ರೆ ಸ್ಟಾರ್ಟಿಂಗ್ ರೇಟ್ ೧೩೦ ರೂ,
ನ್ಯೂಸ್‌ ೧೮ ಕನ್ನಡ: ಕಲರ್ ಬರುತ್ತಾ?
ನಕಲಿ ಟೀ ಪುಡಿ ಮಾರಾಟಗಾರ: ಕಲರ್ ಬರುತ್ತೆ, ಕಲರ್ ಮೇಲೆನೇ ಕಾಣಿಸುತ್ತೆ ನೋಡಿ, ಕಲರ್ ಮಿಕ್ಸಿಂಗ್ ನಾವೇ ಮಾಡೋದು. ಕಲರ್ ಎಷ್ಟು ಬೇಕಾದ್ರೂ ಹಾಕಿ ಕೊಡ್ತೀವಿ.
ನ್ಯೂಸ್‌ ೧೮ ಕನ್ನಡ: ನಮ್ಮ ಟೇಸ್ಟ್‌ಗೆ ಅಡಿಕ್ಟ್ ಆಗೋ ಥರಾ ಮಾಡೋಕೆ ಏನಾದ್ರೂ ಇದೆಯಾ?
ನಕಲಿ ಟೀ ಪುಡಿ ಮಾರಾಟಗಾರ: ಅಡಿಕ್ಷನ್, ಅದೇ ಮೈನ್, ಅದಕ್ಕೆ ಒಂದು ಲವಂಗಾ ಕೊಡ್ತೀನಿ. .ಎಲ್ಲಾರು ಶುಂಠಿ ಹಾಕ್ತಾರೆ, ಎಲಕ್ಕಿ ಹಾಕ್ತಾರೆ.
ನ್ಯೂಸ್‌ ೧೮ ಕನ್ನಡ: ನಾವು ಮತ್ತೆ ಮತ್ತೆ ಟೀ ಕುಡಿಬೇಕು ಅಂತಾ ಅಡಿಕ್ಟ್ ಆಗ್ಬೇಕು.
ನಕಲಿ ಟೀ ಪುಡಿ ಮಾರಾಟಗಾರ: ಯಾವತ್ತೂ ಬೆಳಗ್ಗೆ ಆದ್ರೆ ಮೊದಲು ಹೋಗಿ ಅಲ್ಲಿ ಟೀ ಕುಡೀಬೇಕು. .ಅವಾಗ್ಲೆ ನನ್ನ ಮೈಂಡ್ ಫ್ರೆಶ್ ಆಗುತ್ತೆ ಅಂತಾ ಹೇಳ್ಬೇಕು. ಅಂಥಾ ಟೀ ಪುಡಿ ನಿಮಗೆ ನಾನು ಮಾಡಿ ಕೊಡ್ತೀನಿ

ನಕಲಿ ಟೀ, ಕಾಫಿ ಪುಡಿ ಧಂಧೆ ಅವ್ಯಾಹತವಾಗಿ ನಡೆಯುತ್ತಿದೆ. ದಿನಕ್ಕೆ ನೂರಾರು ಟನ್ ನಕಲಿ ಟೀ ಮಾರಾಟವಾಗುತ್ತಿದೆ. ನಮ್ಮ ನಾಡಿನ ಹೆಚ್ಚಿನ ಕಾಫಿ, ಟೀ ಹೋಟೆಲ್‌ಗಳಲಿ ಇದೇ ಟೀ ಪುಡಿಯನ್ನು ಬಳಸಲಾಗುತ್ತಿದೆ. ಬೆಲೆ ಕಡಿಮೆ – ಒಂದು ಕೆಜಿಗೆ ೧೦೫ ರಿಂದ ೧೧೦ ರೂಪಾಯಿಗಳಿಗೆ ಮಾರಾಟವಾಗುತ್ತದೆ.

ನಕಲಿ ಟೀ ಸಗಟು ಮಾರಾಟಗಾರ

ನಕಲಿ ಟೀ ಪುಡಿ ಮಾರಾಟಗಾರ: ಈ ಟೀ ಪುಡಿ ೧೧೦ ರೂ. ಇದು ತಗೋಳಿ.
ನ್ಯೂಸ್ ೧೮ ಕನ್ನಡ: ೧೧೦ ರೂಪಾಯಿನಾ? ಇದು ಕಲರ್ ಹೇಗೆ ಬರುತ್ತೆ?
ನಕಲಿ ಟೀ ಪುಡಿ ಮಾರಾಟಗಾರ: ಒಳ್ಳೆ ಫಾಸ್ಟ್ ಕಲರ್. ಚೆನ್ನಾಗಿ ಬರುತ್ತೆ.
ನ್ಯೂಸ್ ೧೮ ಕನ್ನಡ: ಇದಕ್ಕಿಂತ ಕಡಿಮೆ ರೇಟ್ ಇಲ್ವಾ?
ನಕಲಿ ಟೀ ಪುಡಿ ಮಾರಾಟಗಾರ: ೧೦೫ ಸರ್, ಇದೆ.
ನ್ಯೂಸ್ ೧೮ ಕನ್ನಡ: ಕಲರ್ ಬರುತ್ತೆ ಅಲ್ವಾ?
ನಕಲಿ ಟೀ ಪುಡಿ ಮಾರಾಟಗಾರ: ಕಲರ್, ಟೇಸ್ಟ್ ಎಲ್ಲಾ ಬರುತ್ತೆ.

ಅತ್ಯಂತ ಅಪಾಯಕಾರಿಯಾಗಿರುವ ಈ ಟೀಯನ್ನು ದಿನವೂ ಕುಡಿದರೆ ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಹೃದ್ರೋಗ ಖಚಿತ.

ಟಿವಿ೧೮ ಸುದ್ದಿ ವಾಹಿನಿ ಸಹಾಯದಿಂದ ಆಹಾರ ಇಲಾಖೆ ಅಧಿಕಾರಿಗಳು ತುಮಕೂರಿನ ತುರುವೇಕೆರೆ, ಮಂಡ್ಯದ ಚಿಗರನಹಳ್ಳಿ ಮತ್ತು ಬೆಂಗಳೂರಿನ ಕಾಟನ್‌ಪೇಟೆಯಲ್ಲಿರುವ ಅಂಗಡಿಗಳ ಮೇಲೆ ಧಾಳಿ ಮಾಡಿದರು. ಧಾಳಿಯ ವೇಳೆ ನೂರಾರು ಕೇಜಿ ನಕಲಿ ಟೀ, ಕಾಫಿ ಪೌಡರ್ ಪತ್ತೆಯಾದವು. ಅವೆಲ್ಲವನ್ನು ಜಪ್ತಿ ಮಾಡಿ ಆರೋಪಿಗಳಿಗೆ ನೋಟೀಸ್ ನೀಡಲಾಯಿತು. ಜೊತೆಗೆ ಇಂತಹ ಕೃತ್ಯಗಳನ್ನು ಪತ್ತೆ ಮಾಡಲು ನಿರಂತರ ಧಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೃಪೆ: ನ್ಯೂಸ್೧೮ ಕನ್ನಡ ವೀಡಿಯೋ ಆಧರಿಸಿ

 

ಸಿಬಿನ್ ಪನಯಿಲ್ ಸೊಮನ್‌

ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

520, Asmi Industrial Complex, Near Ram Mandir Railway Station, Goregaon West, 400104, Mumbai, Maharashtra.

Download Our Mobile App

IndSamachar Android App IndSamachar IOS App
To Top
WhatsApp WhatsApp us