ಪಾಕಿಸ್ತಾನವು ಅಪ್ರಚೋದಿತ ಗುಡ್ಡು-ಸಿಡಿಮದ್ದು ಹಾರಿಸುವಿಕೆಯನ್ನು ಮುಂದುವರೆಸಿದೆ.
ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಅಪ್ರಚೋದಿತ ಗುಂಡು-ಸಿಡಿಮದ್ದು ಹಾರಿಸತೊಡಗಿತು. ಕುಟುಂಬವೊಂದರ ಮೂವರು ಇದಕ್ಕೆ ತುತ್ತಾಗಿ ಸತ್ತುಹೋದರು. ಒಬ್ಬರಿಗೆ ತೀವ್ರ ಗಾಯಗಳಾಗಿವೆ. ಅಲ್ಲದೇ ಸಿಡಿಮದ್ದು ತಗುಲಿ ಮೂರು ಮನೆಗಳಿಗೆ ಹಾನಿಯಾಗಿದೆ.
“ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡು-ಸಿಡಿಮದ್ದು ಧಾಳಿಯಲ್ಲಿ ಮೂವರು ನಾಗರಿಕರು ಸತ್ತುಹೋದರು” ಎಂದು ಪೂಂಚ್ ವಲಯದ ಹಿರಿಯ ಎಸ್ಪಿ ರಮೇಶ್ ಕುಮಾರ್ ಅಂಗ್ರಾಲ್ ವಿವರಿಸಿದರು.
ಐಎಎಫ್ ಪೈಲಟ್ ವಿಂಗ್ ಕಮ್ಯಾಂಡರ್ ಅಬಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನ ವಿಮಾನ ಸೇನೆಯವರು ವಶಕ್ಕೆ ತೆಗೆದುಕೊಂಡಾಗಲಿಂದಲು ಗಡಿಭಾಗಗಳಲ್ಲಿ ಅಪ್ರಚೋದಿತ ಗುಂಡು-ಸಿಡಿಮದ್ದು ಸಿಡಿಸಿ ಕದನವಿರಾಮವನ್ನು ಉಲ್ಲಂಘಿಸುತ್ತಲೇ ಇದೆ.
