ಶ್ರೀ ತುಲಸೀದಾಸ ವಿರಚಿತ “ಹನುಮಾನ್ ಚಾಲೀಸ” ಕನ್ನಡ ಅನುವಾದ
ಪಂಡಿತ್ ಶ್ರೀ ಜಿ ಜಯರಾಮ್ ಅವರಿಂದ
ಮೂಲ ಕೃಪೆ – ಶ್ರೀ ಬ್ರಹ್ಮ ಚೈತನ್ಯ ಶ್ರೀರಾಮ ಮಂದಿರ, ಎನ್ ಆರ್ ಬಡಾವಣೆ, ಚಿಂತಾಮಣಿ 563125 ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
ಪ್ರಾರ್ಥನಾ ಶ್ಲೋಕ
ಶ್ರೀಗುರುಚರಣ ಸರೋಜ ರಜದಿಂ |
ಮನದರ್ಪಣ ಸ್ವಚ್ಛ ಮಾಡುವೆನು |
ನಾಲ್ಕು ಪುರುಷಾರ್ಥವನೀವ |
ಶ್ರೀರಾಮ ಕೀರ್ತಿಯ ಬಣ್ಣಿಸಿ ಪಾಡುವೆನು ||
ಬುದ್ಧಿಹೀನನ ಮೊರೆಯನಾಲಿಸಿ |
ಪವನ ಕುಮಾರ ಸುಬುದ್ಧಿಯ ನೀಡು |
ಪಂಚಕ್ಲೇಶ ಷಡ್ವಿಕಾರಗಳನು |
ನಾಶಗೊಳಿಸಿ ಬಲಬುದ್ಧಿಯ ನೀಡು ||
ಹನುಮಾನ್ ಚಾಲೀಸ
ಜಯ ಹನುಮಾನ ಜ್ಞಾನಗುಣಸಾಗರ
ಜಯ ಕಪೀಶ ಮೂರ್ಲೋಕ ಪ್ರಭಾಕರ ||1||
ರಾಮದೂತ ಅತುಲಿತ ಬಲಧಾಮ
ಅಂಜನಿಪುತ್ರ ಪವನಸುತ ನಾಮ ||2||
ಮಹಾವೀರ ವಿಕ್ರಮ ಬಜರಂಗೀ
ಕುಮತಿ ನಿವಾರಕ ಸುಮತಿಯ ಸಂಗೀ ||3||
ಕಾಂಚನ ರಂಜತ ಸುಂದರ ವೇಷ
ಕರ್ಣಕುಂಡಲ ಗುಂಗುರುಕೇಶ ||4||
ವಜ್ರಗದಾಧರ ಧ್ವಜಕರಶೋಭಿತ
ಸುಂದರಭುಜ ಉಪವೀತ ಅಲಂಕೃತ ||5||
ಶಂಕರಕುವರ ಕೇಸರೀ ನಂದನ
ತೇಜಪ್ರತಾಪ ಮಹಾ ಜಗವಂದನ ||6||
ವಿದ್ಯಾವಾನ ಗುಣೀ ಅತಿ ಚತುರ
ರಾಮಕಾರ್ಯವೆಸಗೆ ಬಲು ಕಾತುರ ||7||
ಪ್ರಭುಕಥೆ ಕೇಳುತ ಮೈಮರೆವಾತ
ಮನವಿ ರಾಮ ಸೌಮಿತ್ರಿ ಸೀತ ||8||
ಸೂಕ್ಷ್ಮರೂಪವನು ಸೀತೆಗೆ ತೋರಿದೆ
ವಿಕಟರೂಪದಲಿ ಲಂಕೆಯ ದಹಿಸಿದೆ ||9||
ಭೀಮರೂಪದಲಿ ಅಸುರರ ಕೊಂದೆ
ರಾಮಚಂದ್ರನ ಕಾರ್ಯವೆಸಗಿದೆ ||10||
ಮೂಲಿಕೆ ತಂದು ಸೌಮಿತ್ರಿಯ ಪೊರೆದೆ
ರಾಮನ ಪ್ರೀತಿಯ ಅಪ್ಪುಗೆ ಪಡೆದೆ ||11||
ಭರತನಂತೆ ನೀನು ಪ್ರಿಯಸಹೋದರ
ಎನ್ನುತ ಹೊಗಳಿದ ಶ್ರೀರಘುವೀರ ||12||
ಸಹಸ್ರಮುಖವು ನಿನ್ನ ಸ್ತುತಿಸಿದೆ
ಎನ್ನುತ ಶ್ರೀಪತಿ ಆಲಿಂಗಿಸಿದ ||13||
ಸನಕಬ್ರಹ್ಮಾದಿ ಮುನಿವರೇಣ್ಯರು
ನಾರದ ಶಾರದೆ ಆದಿಶೇಷರು ||14||
ಯಮಕುಬೇರ ದಿಕ್ಪಾಲಕರೆಲ್ಲರು
ಕವಿಕೋವಿದರು ನಿನ್ನ ಸ್ತುತಿಸಿಹರು ||15||
ಸುಗ್ರೀವಗೆ ನೀ ಸಹಾಯ ಮಾಡಿದೆ
ರಾಮಸಖ್ಯದಿ ರಾಜ್ಯ ಕೊಡಿಸಿದೆ ||16||
ನಿನ್ನುಪದೇಶ ವಿಭೀಷಣ ಒಪ್ಪಿದ
ಲಂಕೇಶನಾದುದ ಜಗವೇ ಬಲ್ಲದು ||17||
ಮಧುರ ಹಣ್ಣೆಂದು ತಿಳಿದು ರವಿಯನು
ಪಿಡಿಯೆ ಹಾರಿದೆ ಸಹಸ್ರಯೋಜನ ||18||
ಪ್ರಭುಮುದ್ರಿಕೆಯನು ಧರಿಸಿ ಬಾಯಲಿ
ಶರಧಿ ಲಂಘನವು ಸೋಜಿಗವಲ್ಲ ||19||
ಎಷ್ಟೇ ಕಠಿಣ ಕಾರ್ಯವೇ ಇರಲಿ
ಅಷ್ಟೇ ಸುಲಭ ನಿನ್ನ ಕೃಪೆಯಿಂದಲಿ ||20||
ರಾಮನ ದ್ವಾರಪಾಲಕ ನೀನು
ನಿನ್ನಾಜ್ಞೆ ವಿನಾ ಒಳ ಬರಲಾರೆನು ||21||
ಸುಖವೆಲ್ಲ ನಿನಗೆ ಶರಣಾಗಿ ಇರಲು
ಭಯವೇಕೆ ಎಮಗೆ ನೀ ರಕ್ಷಿಸಲು ||22||
ನಿನ್ನ ತೇಜ ನಿನ್ನಂದಲೆ ಶಮನ
ನಿನ್ನ ಘರ್ಜನೆಗೆ ತ್ರಿಲೋಕ ಕಂಪನ ||23||
ಮಹಾವೀರ ನಿನ್ನ ನಾಮವ ಕೇಳಲು
ಸನಿಹಕೆ ಬರದು ಭೂತಪ್ರೇತಗಳು ||24||
ಹನುಮ ನಿನ್ನನು ಸದಾ ಭಜಿಸಲು
ನಾಶವಾಗುವುವು ರೋಗರುಜಗಳು ||25||
ಹನುಮನ ಧ್ಯಾನಿಸೆ ತ್ರಿಕರಣದಿಂದ
ಕಷ್ಟಕಾರ್ಪಣ್ಯವು ದೂರಾಗುವುದು ||26||
ತಪಸ್ವೀರಾಮನ ಕಾರ್ಯಗಳೆಲ್ಲವ
ಯಶಸ್ಸಿನಿಂದ ಸಫಲಗೊಳಿಸಿದವ ||27||
ನೆರವೇರಿಸುತಲಿ ಭಕ್ತರಾಭೀಷ್ಟವ
ಅಮಿತ ಫಲವನು ನೀ ಕರುಣಿಸುವೆ ||28||
ನಾಲ್ಕು ಯುಗಗಳಲೂ ಪ್ರತಾಪ ನಿನ್ನದೆ
ನಿನ್ನಯ ಪ್ರಭೆಯ ಲೋಕ ಬೆಳಗಿದೆ ||27||
ಸಾಧುಸಂತರನು ಪೊರೆದು ಸಲಹಿದೆ
ಅಸುರರ ಕೊಂದು ರಾಮಪ್ರಿಯನಾದೆ ||20||
ಅಷ್ಟಸಿದ್ಧಿ ನವನಿಧಿಯ ಕೊಡುವವ
ಜಾನಕಿ ಮಾತೆಯಿಂ ವರವ ಪಡೆದವ ||31||
ನಿನ್ನಲಿ ಇರಲು ರಾಮರಸಾಯನ
ಸದಾ ರಘುಪತಿಯ ದಾಸನು ನೀನು ||32||
ನಿನ್ನ ಭಜಿಸಿದವ ರಾಮನ ಪಡೆವ
ಜನ್ಮಜನ್ಮದ ದುಃಖವ ಮರೆವ ||33||
ಜೀವಿಸಿರಲು ಹರಿಭಕ್ತನೆನಿಸುವ
ಅಂತ್ಯಸಮಯದಿ ರಾಮನ ಸೇರುವ ||34||
ಅನ್ಯದೇವರನು ಭಜಿಸದಿದ್ದರು
ಹನುಮನ ಸೇವಿಸೆ ಸುಖವ ಪಡೆವರು ||35||
ವೀರ ಹನುಮನ ಭಜಿಸಲು ಭಕ್ತರು
ವ್ಯಾಧಿ ಸಂಕಟದಿ ಮುಕ್ತಿ ಪಡೆವರು ||36||
ಜಯ ಜಯ ಜಯ ಹನುಮಾನ ಗೋಸಾಯಿ
ಗುರುವಿನಂದದಿ ಕೃಪೆ ಇದು ಸಾಯಿ ||37||
ನೂರು ಬಾರಿ ಇದ ಪಠಣ ಮಾಡಿದವ
ಬಂಧನ ಕಳಚುತ ನಿಜ ಸುಖ ಪಡೆವ ||38||
ಯಾರು ಪಠಿಸುವರೊ ಹನುಮ ಚಾಲೀಸ
ಸಿದ್ಧಿ ಪಡೆಯುವರು ಸಾಕ್ಷಿ ಗೌರೀಶ ||39||
ತುಲಸೀದಾಸ ಸದಾ ಹರಿಭಕ್ತ
ವಾಸಿಸು ಎನ್ನ ಹೃದಯದಿ ನಾಥ ||40||
ಪರಮ ಭಕ್ತ ಶ್ರೀ ತುಲಸೀದಾಸರ
ಚರಣಕೆ ವಂದಿಪೆ ನಿತ್ಯ ನಿರಂತರ ||41||
ಮಂಗಳ ಶ್ಲೋಕ
ಪವನ ತನಯ ಸಂಕಟಹರಣ ಮಂಗಳಮೂರುತಿ ರೂಪ
ರಾಮ ಸೌಮಿತ್ರಿ ಸೀತಾ ಸಹಿತ ನೆಲೆಸು ಹೃದಯದಿ ಸುರಭೂಪ ||42||
*****
ಹನುಮ ದಯೆಯಿಂ ಅತನ ಚರಿತೆಯ
ಕನ್ನಡ ಭಾಷೆಗೆ ಬರೆದಂತಾಯ್ತು ||43||
ಇಂತು ಚೈತನ್ಯವ ನೀಡಿದ ಪ್ರಭುವನು
ಚೈತನ್ಯದಾಸ ಭಕ್ತಿಲಿ ನಮಿಪನು ||44||
||ಓಂ ಶಾಂತಿಃ ಶಾಂತಿಃ ಶಾಂತಿಃ||
Pingback: Buy Focalin Online
Pingback: 안전바카라
Pingback: CBD Oil Capsules
Pingback: dang ky 188bet
Pingback: immediate edge review
Pingback: bitcoin era
Pingback: copy heuer link
Pingback: https://maxiextermination.com/pest-control-sullivan-nh/
Pingback: Regression testing
Pingback: 안전놀이터
Pingback: Digital Transformation Solutions
Pingback: Og Kush
Pingback: Handyman
Pingback: canlı bahis siteleri
Pingback: pengluaran sgp
Pingback: Glass Repair
Pingback: 메이저사이트
Pingback: it danışmanlık
Pingback: Plymouth workers call in sick more than any other UK city
Pingback: review
Pingback: blue meanie cubensis, b+ cubensis grow,
Pingback: สล็อตวอเลท ไม่มีขั้นต่ำ
Pingback: sbobet
Pingback: shroom chocolate
Pingback: CBD for Arthritis
Pingback: Key Wall Safe
Pingback: best psilocybin spores online
Pingback: look at this site
Pingback: buy benelli guns
Pingback: danabol ds
Pingback: Benelli shotguns
Pingback: 토렌트 다운
Pingback: try here
Pingback: https://www.buoyhealth.com/blog/health/phenq-reviews
Pingback: best site