ನಮ್ಮ ದೇಶದ ಶಕ್ತಿ ಎಂತಹದ್ದು ಎಂಬುದನ್ನು ಪ್ರಪಂಚದ ದೇಶಗಳು ಮನಗಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ರಾಜಸ್ಥಾನದ ಚೂರೂ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇಂದು ಮುಂಜಾನೆ ಐಎಎಫ್ ಪಡೆಗಳು ಎಲ್ಒಸಿ ದಾಟಿ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ಧಾಳಿ ನಡೆಸಿ ಧ್ವಂಸಗೊಳಿಸಿದ ಸಾಧನೆಯನ್ನು ನೇರವಾಗಿ ಉಲ್ಲೇಖಿಸದೆ ಮಾತನಾಡುತ್ತಿದ್ರರು.
ಈ ದೇಶವು ಸುರಕ್ಷಿತವಾಗಿರಲಿದೆ, ಕ್ಷೇಮವಾಗಿರಲಿದೆ ಎಂದು ಮೋದಿಯವರು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ದುರ್ಬಲ ಸರ್ಕಾರಕ್ಕಿಂತ ಸುಭದ್ರ, ಸದೃಢ ಸರ್ಕಾರಕ್ಕೆ ಮತದಾನ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಅವರು ಒತ್ತಿ ಹೇಳಿದರು.
“ಇಂದು ನಿಮ್ಮ ಮನಃಸ್ಥಿತಿಯನ್ನು ನಾನು ಗಮನಿಸಬಲ್ಲೆ, ನಿಮ್ಮ ‘ಜೋಶ್’ ನನಗೆ ಅರ್ಥವಾಗುತ್ತದೆ” ಎಂದು ಪ್ರಧಾನಿ ಮೋದಿಯವರು ಹೇಳಿದರು.
ಇದು ಮಾತೃಭೂಮಿಯ ಮೇಲೆ ಪ್ರಮಾಣ. ತಲೆತಗ್ಗಿಸಿಕೊಂಡಿರಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಮೋದಿಯವರು ಹೇಳಿದರು.
ಸಣ್ಣ ರೈತರಿಗಾಗಿ ಸರ್ಕಾರದ ಕಲ್ಯಾಣ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯ ಸಾಧನೆಗಳ ಬಗ್ಗೆ ಮೋದಿಯವರು ಮಾತನಾಡಿದರು. “ಚೂರೂದಿಂದ ಒಬ್ಬ ರೈತರೂ ಇಲ್ಲ ಏಕಂದರೆ ರಾಜ್ಯ ಸರ್ಕಾರವು ಸಂಭಾವ್ಯ ಫಲಾನುಭವಿ ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಿಲ್ಲ” ಎಂದರು.
