“ಕರ್ನಾಟಕದ ಸ್ಕಾಟ್ಲೆಂಡ್” ಎಂದೇ ಪ್ರಸಿದ್ಧವಾದ ಕರ್ನಾಟಕದ ನೈಋತ್ಯ ಅಂಚಿನಲ್ಲಿರುವ ಕೊಡಗು ಜಿಲ್ಲೆಯ ನಕ್ಷೆಯಲ್ಲಿ ಹೊಸ ಪರಿವರ್ತನೆಯಾಗಲಿದೆ. ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ ಕೇವಲ ಮೂರೇ ತಾಕೂಲುಗಳಿವೆ: ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ.
ಶೀಘ್ರದಲ್ಲೇ ಕೊಡಗು ಜಿಲ್ಲೆಗೆ ಎರಡು ಹೊಸ ತಾಲೂಕುಗಳು ಆಸ್ತಿತ್ವಕ್ಕೆ ಬರಲಿವೆ: ಕುಶಾಲನಗರ ಮತ್ತು ಪೊನ್ನಂಪೇಟೆ.
ಕುಶಾಲನಗರ ಸದ್ಯಕ್ಕೆ ಸೋಮವಾರಪೇಟೆ ತಾಲೂಕಿನ ಅಂಗವಾಗಿದೆ. ಇದು ಕೊಡಗು ಜಿಲ್ಲೆಯ ಈಶಾನ್ಯ ಗಡಿಯಲ್ಲಿದೆ. ಕುಶಾಲನಗರವು, ಮೈಸೂರಿನಿಂದ ಮಡಿಕೇರಿಯ ಕಡೆಗೆ ಸಾಗುವ ಮಾರ್ಗದಲ್ಲಿದೆ. ೧೭೫೦ರಲ್ಲಿ ಸ್ಥಾಪಿದವಾದ ಕುಶಾಲನಗರವು, ಕೊಡಗು ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರ. ಕೊಡಗು ಜಿಲ್ಲೆಯ ಅತಿ ದೊಡ್ಡ ನಗರವಾದ ಕುಶಾಲನಗರ ಈ ಜಿಲ್ಲೆಯ ವಾಣಿಜ್ಯ ಕೇಂದ್ರವೂ ಹೌದು.
ಕುಶಾಲನಗರ ಮತ್ತು ಪೊನ್ನಂಪೇಟೆ ನಿವಾಸಿಗಳು ಸುಮಾರು ೧೦ ವರ್ಷಗಳಿಂದಲೂ ತಾಲೂಕು ಸ್ಥಾನಮಾನಕ್ಕಾಗಿ ಬೇಡಿಕೆಯಿಟ್ಟಿದ್ದರು. ಇವರ ನಿರಂತರ ಶ್ರಮದ ಫಲವಾಗಿ ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಹಾಗಉ ಮಂತ್ರಿಗಳಾದ ಪುಟ್ಟರಾಜು ಮತ್ತು ಆರ್ ವಿ ದೇಶಪಾಂಡೆ, ತಾಲೂಕು ಸ್ಥಾನಮಾನದ ಪ್ರಸ್ತಾಪಕ್ಕೆಸಂಪುಟ ಸಭೆಯಲ್ಲಿ ಅನುಮತಿ ನೀಡಿದ್ದಾರೆ.
ಪೊನ್ನಂಪೇಟೆ ಸದ್ಯಕ್ಕೆ ವಿರಾಜಪೇಟೆ ತಾಲೂಕಿನ ಒಂದು ಪಟ್ಟಣವಾಗಿದೆ. ದಿವಾನ್ ಚೆಪ್ಪುಡಿರ ಪೊನ್ನಪ್ಪ ಅವರ ಗೌರವಾರ್ಥ ೧೮೨೧ರಲ್ಲಿ ಈ ಸ್ಥಳಕ್ಕೆ ಪೊನ್ನಂಪೇಟೆ ಎಂದು ಹೆಸರಿಡಲಾಯಿತು. ಪೊನ್ಮಂಪೇಟೆಯು, ಗೋಣಿಕೊಪ್ಪಲು ಪಟ್ಟಣದಿಂದ ದಕ್ಷಿಣ ದಿಕ್ಕಿನಲ್ಲಿ ಶ್ರೀಮಂಗಲ-ಕುಟ್ಟದ ಕಡೆ ಸಾಗುವ ಮಾರ್ಗದಲ್ಲಿದೆ. ತ್ವರಿತ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಪೊನ್ನಂಪೇಟೆಯೂ ಸೇರಿದೆ. ಈ ಪಟ್ಟಣದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು, ತಾಲೂಕು ಕಛೇರಿಗಳು, ಬ್ಯಾಂಕುಗಳು, ವಿದ್ಯಾಸಂಸ್ಥೆಗಳು ಇವೆ.
ಈಗ ಕುಶಾಲನಗರ ಮತ್ತು ಪೊನ್ಮಂಪೇಟೆ ಎರಡೂ ತಾಲೂಕುಗಳಾಗಿದ್ದು, ಮುಖ್ಯಮಂತ್ರಿಗಳು ಈ ತಿಂಗಳ ೨೮ರಂದು ಕೊಡಗು ಜಿಲ್ಲೆಗೆ ಭೇಡಿ ನೀಡುವಾಗ ಘೋಷಿಸಲಿದ್ದಾರೆ.
