ಕಳೆದ ವರ್ಷ ಮೇ ತಿಂಗಳಲ್ಲಿ ಚುನಾವಣೆ ನಡೆದ ಬಳಿಕ ಜಾತ್ಯಾತೀತ ಜನತಾ ದಳ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಜುಲೈ ತಿಂಗಳ ಮೊದಲೆನೆಯ ವಾರದಲ್ಲಿ, ಹಣಕಾಸು ಖಾತೆ ತಾವೇ ನಿರ್ವಹಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದರು.
ಏಳು ತಿಂಗಳುಗಳ ಬಳಿಕ, ಇಂದು ಅವರು ಎರಡನೆಯ ಬಜೆಟ್ ಮಂಡಿಸಿದರು. ಆದರೆ ಶುಕ್ರವಾರ ಬೆಳಿಗ್ಗೆ ೧೦.೩೦ ಇಂದ ೧೨.೦೦ ತನಕ ರಾಹುಕಾಲವಿದ್ದರಿಂದ ಕುಮಾರಸ್ವಾಮಿಯವರು ತದನಂತರ ಬಜೆಟ್ ಮಂಡಿಸಿದರು.
ಬಜೆಟ್ ಮಂಡನೆಯ ಮುಂಚೆ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ ಶಾಸಕರೆಲ್ಲರು ಸಭಾತ್ಯಾಗ ಮಾಡಿ ಗಾಂಧಿ ಪ್ರತಿಮೆಯ ಮುಂದೆ ಧರಣಿಯಲ್ಲಿ ಕುಳಿತರು.
ಬಜೆಟ್ ಮುಖ್ಯಾಂಶಗಳು ಹೀಗಿವೆ:
ರಾಜ್ಯದ ಬಜೆಟ್ ಪಕ್ಷಿ ನೋಟ:
- ಆಯವ್ಯಯ ಗಾತ್ರ (ಸಂಚಿತ ನಿಧಿ): ೨೩೪೧೫೩ ಕೋಟಿ ರೂಪಾಯಿಗಳು
- ಒಟ್ಟು ಸ್ವೀಕೃತಿ: ೨೩೦೭೩೮ ಕೋಟಿ ರೂಪಾಯಿಗಳು
- ರಾಜಸ್ವ ಸ್ವೀಕೃತಿ: ೧೮೧೮೬೩ ಕೋಟಿ ರೂಪಾಯಿಗಳು
- ಸಾರ್ವಜನಿಕ ಋಣ ಸ್ವೀಕೃತಿ: ೪೮೬೦೧ ಕೋಟಿ ರೂಪಾಯಿಗಳು
- ಬಂಡವಾಳ ಸ್ವೀಕೃತಿ: ೪೮೮೭೬ ಕೋಟಿ ರೂಪಾಯಿಗಳು
- ಒಟ್ಟು ವೆಚ್ಚ: ೨೩೪೧೫೩ ಕೋಟಿ ರೂಪಾಯಿಗಳು
- ರಾಜಸ್ವ ವೆಚ್ಚ: ೧೮೧೬೦೫ ಕೋಟಿ ರೂಪಾಯಿಗಳು
- ಬಂಡವಾಳ ವೆಚ್ಚ: ೪೨೮೫೪ ಕೋಟಿ ರೂಪಾಯಿಗಳು
- ಸಾಲ ಮರುಪಾವತಿ: ೯೯೬೪ ಕೋಟಿ ರೂಪಾಯಿಗಳು
- ರೈತರ ಸಾಲ ಮನ್ನಾ: ವಾಣಿಜ್ಯ ಬ್ಯಾಂಕ್ಗಳಿಂದ ಪಡೆದ ಸಾಲಗಳಿಗೆ ೬೫೦೦ ಕೋಟಿ ರೂಪಾಯಿಗಳ ತನಕ ಸಹಕಾರಿ ಬ್ಯಾಂಕ್ಗಳಿಂದ ಪಡೆದ ಸಾಲಗಳಿಗೆ ೬೧೫೦ ಕೋಟಿ ರೂಪಾಯಿಗಳ ತನಕ
- ನೀರಾವರಿ ಯೋಜನೆಗಾಗಿ ಒಟ್ಟು ೧೫೬೩ ಕೋಟಿ ರೂಪಾಯಿಗಳು ಮೀಸಲು
- ಗ್ರ್ರಾಮೀಣ ಉದ್ಯೋಗ ಖಾತರಿ ಯೊಜನೆಯಡಿ ೧೦ ಕೋಟಿ ಉದ್ಯೋಗ ಸೃಷ್ಟಿಸಲಾಗುವುದು
- ಹೊಸ ತಾಲ್ಲೂಕುಗಳು ಘೋಷಣೆಯಾಗಿವೆ: ರಾಮನಗರ ಜಿಲ್ಲೆ – ಹಾರೋಹಳ್ಳಿ; ಚಿಕ್ಕಮಗಳೂರು ಜಿಲ್ಲೆ – ಕಳಸ; ಚಿಕ್ಕಬಳ್ಳಾಪುರ ಜಿಲ್ಲೆ – ಚೇಳೂರು; ಬಾಗಲಕೋಟೆ ಜಿಲ್ಲೆ – ತೇರದಾಳ
- ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಸದೃಢತೆಗಾಗಿ ೧೦ ಕೋಟಿ ರೂಪಾಯಿಗಳ ಅನುದಾನ
- ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ೧೦ ಆಯ್ದ ಮೆಟ್ರೊ ನಿಲ್ದಾಣಗಳಿಂದ ಚಿಕ್ಕ ಗಾತ್ರದ ಬಸ್ಸುಗಳನ್ನು ಬೆಂಮಸಾಸಂ ಚಾಲಿಸಲಿದೆ.ರಾಜ್ಯದೆಲ್ಲಡೆ ಮಾನವ-ಆನೆ ಘರ್ಷಣೆ ತಡೆಗಟ್ಟಲು ರೈಲು ಬೇಲಿ ಸ್ಥಾಪನೆಗಾಗಿ ೧೦೦ ಕೋಟಿ ರೂಪಾಯಿ ಮೀಸಲಿಡಲಾಗುವುದು.
- ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಮಟ್ಟದ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ೪.೫ ಕೋಟಿ ರೂಪಾಯಿಗಲ ಅನುದಾನ ನೀಡಲಾಗುವುದು.
- ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ೬೦ ಕೋಟಿ ವೆಚ್ಚದಲ್ಲಿ ತುಮಕೂರಿನಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗುವುದು.
- ರೇಷ್ಮೆ ಕೃಷಿ ನಿಗಮಕ್ಕೆ ೧೦ ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು.
- ರಾಮನಗರ ಮತ್ತು ಹಾವೇರಿ ಜಿಲ್ಲೆಗಳ ರೇಷ್ಮೆ ಮಾರುಕಟ್ಟೆಗಳ ಆಧುನೀಕರಣ ಮತ್ತು ಸದೃಢಗೊಳಿಸುವಿಕೆಗಾಗಿ ೧೦ ಕೋಟಿ ರೂಪಾಯಿ ಅನುದಾನ
- ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನರುತ್ಥಾನಕ್ಕೆ ೫ ಕೋಟಿ ರೂಪಾಯಿ ಅನುದಾನ
- ಸಂತೆಮಾರನಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣೆಗಾಗಿ ೨ ಕೋಟಿ ರೂಪಾಯಿ ಅನುದಾನ
- ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ ೭೫೦೦ ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು
- ಕೊಡಗು ವೈದ್ಯಕೀಯ ವಿದ್ಯಾಲಯ ಆವರಣದಲ್ಲಿ ೪೫೦ ಹಾಸಿಗೆಗಳುಳ್ಳ ಆಸ್ಪತ್ರೆ ಸ್ಥಾಪಿಸಲು ೧೦೦ ಕೋಟಿ ರೂಪಾಯಿ ಮೀಸಲಿಡಲಾಗುವುದು.
- ನೀರಾವರಿ ಯೋಜನೆಗಾಗಿ ೧೭೨೧೨ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುವುದು. ಬೆಂಗಳುರಿನಲ್ಲಿನ ಯೋಜನೆಗಾಗಿ ೧೫ ಕೋಟಿ ರೂಪಾಯಿಗಳು
- ೧೯೭೦ ಹಾಗೂ ೧೯೮೦ರ ದಶಕಗಳಲ್ಲಿ ನಗರದ ರಸ್ತೆಗಳಲ್ಲಿ ಓಡಾಡಿ ನಂತರ ಮುಲೆಗುಂಪಾದ ಡಬಲ್ ಡೆಕರ್ ಬಸ್ಗಳಿಗೆ ಮರುಜೀವ ನೀಡಲಾಗುವುದು
- ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ೧೦ ಆಯ್ದ ಮೆಟ್ರೊ ನಿಲ್ದಾಣಗಳಿಂದ ಚಿಕ್ಕ ಗಾತ್ರದ ಬಸ್ಸುಗಳನ್ನು ಬೆಂಮಸಾಸಂ ಚಾಲಿಸಲಿದೆ
- ಕೃಷ್ಣರಾಜಪುರ ಮತ್ತು ಹೆಬ್ಬಾಳ ಮೂಲಕ ಹೋಗುವ ಸಿಲ್ಕ್ ಬೋರ್ಡ್ – ಹೊರ ವರ್ತುಲ ರಸ್ತೆ – ವಿಮಾನ ನಿಲ್ದಾಣ – ಮೆಟ್ರೊ ರೈಲು ಮಾರ್ಗವನ್ನು ೧೬೫೭೯ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
- ಎಸ್ಎಸ್ಎಲ್ಸಿ ಮೌಲ್ಯಮಾಪನ ಕೇಂದ್ರದ ಡಿಜಿಟಲೀಕರಣಕ್ಕಾಗಿ ೧ ಕೋಟಿ ರೂಪಾಯಿ ಮೀಸಲು
