ಇಂದು (20-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಕರೂರು, ಭಾರಂಗಿ ಹೋಬಳಿ ಕಲ್ಲಂಗಡಿ ಬೆಳೆಗಾರರ ನಿಯೋಗದೊಂದಿಗೆ ಶಿವಮೊಗ್ಗದಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ ರವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ
ಲಾಕ್ ಡೌನ್ ನಿಂದ ಕಲ್ಲಂಗಡಿಯನ್ನು ಖರೀದಿಸಲು ಬೇರೆ ರಾಜ್ಯ, ಜಿಲ್ಲೆ ಗಳಿಂದ ಖರೀದಿದಾರರು ಬರದೇ ರೈತರು ಸಂಕಷ್ಟದಲ್ಲಿದ್ದಾರೆ. ಕಲ್ಲಂಗಡಿ ಬೆಳೆಗಾರರಿಗೆ ಸೂಕ್ತವಾದ ಮಾರುಕಟ್ಟೆ ಮತ್ತು ಬೆಲೆ ನಿಗದಿ ಪಡಿಸುವ ಬಗ್ಗೆ ಚರ್ಚಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ದತ್ತಾತ್ರಿ ಯವರು, ನಾಗರಾಜ್ ಬೊಬ್ಬಿಗೆ, ದೇವರಾಜ್ ಮಾವಿನಕೈ, ಚಂದ್ರರಾಜ್ ಮಾಲೂರು, ರೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

By Goutham K S, Sagara
WhatsApp us