ಮೂಲ:
ಸಿಬಿನ್ ಪಿ ಸೋಮನ್
ಲೇಖಕರು: ರಾಮಚಂದ್ರ ಸಾಗರ್
ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಜನಶತಾಬ್ದಿ ಎಕ್ಸಪ್ರೆಸ್ ರೈಲು ಇದೇ ಜನವರಿಯಿಂದ ಪ್ರಾರಂಭವಾಗುತ್ತಿದೆ ಎಂಬುದು ನನಗೆ ಈಗಷ್ಟೇ ತಿಳಿಯಿತು, ಆದರೆ ಈ ಹಿಂದೆ ಯಾವುದೇ ರೈಲು ಶಿವಮೊಗ್ಗದಿಂದ ಹೊರಡುವಂತವು ಎಲ್ಲವೂ ತಾಳಗುಪ್ಪದಿಂದಲೇ ಹೊರಡುತ್ತಿದ್ದವು. ಇದನ್ನು ಸಾಗರ ತಾಲ್ಲೂಕು ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆಯ ಭಾಗಕ್ಕೂ ಅನುಕೂಲವಾಗುತ್ತಿತ್ತು. ಆದರೆ ಇಂದು ಹೊಸದಾಗಿ ಯಾವುದೇ ರೈಲು ಈ ಮಾರ್ಗಕ್ಕೆ ಸೇರಿದರೂ ಅದನ್ನು ತಾಳಗುಪ್ಪವರೆಗೆ ವಿಸ್ತರಿಸುವ ಸೌಜನ್ಯವಿಲ್ಲವಾಗಿದೆ. ಸಾಗರ ತಾಲ್ಲೂಕಿನ ಬಹುತೇಕ ಹಳ್ಳಿ ಜನರು ನಮ್ಮ ವ್ಯವಸಾಯದ ಭೂಮಿ, ಮನೆಗಳನ್ನು ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಬೃಹತ್ ಆಣೇಕಟ್ಟೆಯನ್ನು ನಿರ್ಮಿಸಿದಾಗ ಕಳೆದುಕೊಂಡರು. ಅರ್ಧ ಶತಮಾನವಾದರೂ ಈ ಜನರಿಗೆ ಇನ್ನೂ ಸಂಪೂರ್ಣ ಮೂಲಭೂತ ಸೌಕರ್ಯ ದೊರೆತಿಲ್ಲ, ಪುನರ್ವಸತಿ ಕಲ್ಪಿಸಿಲ್ಲ. ನೊಂದವರ ನೋವು ಹಾಗೇ ಇದೆ. ಇಂತಹ ಪ್ರದೇಶಗಳನ್ನು ಅಭಿವೃದ್ಧಿಯ ವಿಚಾರದಲ್ಲಿ ತಾರತಮ್ಯಗೈಯುವುದು ಸಾಧಕವಲ್ಲ.
ಕಾರ್ಗಲ್ ನಿಂದ ವಿದ್ಯುತ್ ಬೆಂಗಳೂರು ತಲುಪಿಸಲು ಬೃಹತ್ ವಿದ್ಯುತ್ ಮಾರ್ಗಗಳನ್ನು ಎಳೆಯಲಾಗಿದೆ, ಇದರಡಿಯಲ್ಲಿ ಅನೇಕರ ವ್ಯವಸಾಯದ ಜಮೀನು, ವಾಸದ ಮನೆಯ ನೆಲೆಕಳೆದುಕೊಂಡಿದ್ದಾರೆ. ಆದರೆ ಇವೆಲ್ಲಾ ಸರ್ಕಾರಕ್ಕೆ ಸಾಧ್ಯವಿದ್ದರೂ ಒಂದು ಗಂಟೆ ಮುಂಚಿತವಾಗಿ ರೈಲು ಓಡಿಸಲು ಅನುವು ಮಾಡಲು ಸಾಧ್ಯವಿಲ್ಲ, ಎಂತಹ ವಿಪರ್ಯಾಸ. ಸೌಕರ್ಯಗಳನ್ನು ಈ ಭೂಮಿಯಿಂದ ಇನ್ನೊಂದೆಡೆಗೆ ಒಯ್ಯುವಲ್ಲಿ ವೇಳಾಪಟ್ಟಿ ಸಮಸ್ಯೆ ಕಾಡುತ್ತದೆ. ಅದೇ ಇಲ್ಲಿಯ ಜನರ ಜೀವನಕ್ಕೆ ಆಧಾರವಾಗಿದ್ದ ವ್ಯವಸಾಯದ ಭೂಮಿ ಕಳೆದುಕೊಂಡು ಸೊರಗುವಾಗ ಯಾವುದೇ ಗೊಂದಲ ಕಾಡದಿರುವುದು ವಿಪರ್ಯಾಸ. ಇವರ ತ್ಯಾಗಕ್ಕೆ ಬೆಲೆಯಿಲ್ಲ. ಅದೇನೇ ಇದ್ದರೂ ಹೋರಾಟ ಮಾಡಿಯೇ ಪಡೆಯುವುದು ಇಲ್ಲಿಯ ಜನರಿಗೆ ಅಭ್ಯಾಸವಾಗಿದೆ. ಪ್ರಗತಿಪರರು ಸದಾ ಸಿದ್ಧರಾಗಿದ್ದಾರೆ. ಶತಾಬ್ಧಿ ರೈಲನ್ನು ಸಾಗರಕ್ಕೆ ತರಲು ಅಂದರೆ ತಾಳಗುಪ್ಪದಿಂದಲೇ ಓಡಿಸುವಂತೆ ಹೋರಾಟ ನಡೆಸುವುದು ಈಗ ಅನಿವಾರ್ಯ… ಇನ್ನು ನೀವು ಏನೆನನ್ನುವಿರಿ?
