ಕನ್ನಡ ಚಲನಚಿತ್ರ ನಿರ್ಮಾಪಕಿ ಜಯಶ್ರೀ ದೇವಿ (೬೦) ಇಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಸ್ತಂಭನವಾಗಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು, ಅಂತಿಮ ವಿಧಿವಧಾನಗಳನ್ನು ಅವರ ಮನೆಯಲ್ಲಿ ಮಾಡಲಾಗುವುದು ಎಂದು ಜಯಶ್ರೀ ದೇವಿ ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ.
ಜಯಶ್ರೀ ದೇವಿ ಅವರು ಮೊಟ್ಟಮೊದಲು ನಿರ್ಮಿಸಿದ ಚಲನಚಿತ್ರ “ಕೋಣ ಈದೈತೆ”. ಈ ಚಲನಚಿತ್ರದಲ್ಲಿ ಡಾ. ವಿಷ್ಣವರ್ಧನ್ ಮತ್ತು ಕುಮಾರ್ ಗೋವಿಂದ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡರು. ನಂತರ “ಭವಾನಿ” ಎಂಬ ಚಲನಚಿತ್ರವನ್ನು ನಿರ್ಮಿಸಿದರು.
೧೯೯೬ರಲ್ಲಿ ತೆರೆಕಂಡ “ನಮ್ಮೂರ ಮಂದಾರ ಹೂವೇ” ಆ ವರ್ಷ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಕನ್ನಡ ಚಲನಚಿತ್ರವಾಯಿತು. ಮಾರನೆಯ ವರ್ಷ “ಅಮೃತವರ್ಷಿಣಿ” ಸಹ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ದುಡ್ಡು ಮಾಡಿತು. ೧೯೯೯ರಲ್ಲಿ ಜಯಶ್ರೀ ದೇವಿ ನಿರ್ಮಿಸಿದ “ಸ್ನೇಹ ಲೋಕ” ಚಲನಚಿತ್ರವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿದರು.
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರೂ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡದ್ದು “ಮುಕುಂದ ಮುರಾರಿ” ಚಲನಚಿತ್ರದಲ್ಲಿ. ಇದು ಜಯಶ್ರೀ ದೇವಿ ನಿರ್ಮಿಸಿದ ಕಟ್ಟಕಡೆಯ ಚಲನಚಿತ್ರ.
ಚಿತ್ರ ಕೃಪೆ: Picture courtesy: www.ibtimes.co.in / PR Handout
