“ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆ ಭಯೋತ್ಪಾದಕರ ಅಟ್ಟಹಾಸದ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ” ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನವೂ ಸಹ ಈ ಘಟನೆಯನ್ನು ಖಂಡಿಸುತ್ತದೆ ಎಂಬ ಹೇಳಿಕೆ ನೀಡಿದೆ.
ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯು ಈ ಕೃತ್ಯದ ತಾನೇ ಹೊಣೆ ಎಂದು ಹೇಳಿಕೊಂಡಿದೆ. ಪ್ರಪಂಚದಲ್ಲಿ ಕುಖ್ಯಾತಿ ಗಳಿಸಿದ ಬಯೋತ್ಪಾದಕ ಮಸೂದ್ ಅಝರ್ ಈ ಗುಂಪಿನ ಮುಖ್ಯಸ್ಥ. ಆತ್ಮಾಹುತಿ ಭಯೋತ್ಪಾದಕ ಆದಿಲ್ ಅಹ್ಮದ್ ಜೈಷ್ ಸಂಘಟನೆಯವನು ಎನ್ನಲಾಗಿದೆ.
ಪಾಕಿಸ್ತಾನದ ಹೇಳಿಕೆಗೆ ಭಾರತದೆಲ್ಲಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಕಳ್ಳನು ತನ್ನ ಕಳ್ಳತನವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ” ಎಂಬುದು ಬಾರತೀಯ ಪ್ರಜೆಯ ಪ್ರತಿಕ್ರಿಯೆ.
ಗುರುವಾರ ಸಂಜೆ ೭೮ ಬಸ್ಸುಗಳಲ್ಲಿ ೨,೫೦೦ ಸೈನಿಕರನ್ನು ಹೊತ್ತ ಸಿಆರ್ಪಿಎಫ್ ಪಡೆಯ ಮೇಲೆ ಜೈಷ್-ಎ-ಮೊಹಮ್ಮದ್ ಅತ್ಮಾಹುತಿ ಧಾಳಿ ನಡೆಸಿತು. ೪೪ ಸಿಆರ್ಪಿಎಫ್ ಯೋಧರು ಹುತಾತ್ಮರಾದರು.
ಇನ್ನೊಂದು ಬೆಳವಣಿಗೆಯಲ್ಲಿ ಭಾರತವು ೧೯೯೬ರಲ್ಲಿ ಪಾಕಿಸ್ತಾನಕ್ಕೆ ನೀಡಿದ್ದ Most Favoured Nation ಸ್ಥಾನಮಾನವನ್ನು ಹಿಂತೆಗೆದುಕೊಂಡಿದೆ.
“ನಾವು ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇವೆ. ಸೇನಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ವರದಿಯಾಗಿದೆ.
