ಪಾಕಿಸ್ತಾನವು ಇಂದು ದಿನದಲ್ಲಿ ಎಲ್ಒಸಿ ಗಡಿಯಲ್ಲಿ ಮೂರು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ.
ರಾಜೌರಿ, ಸುಂದರ್ಬನಿ, ಮನ್ಕೋಟೆ, ಖಾರಿ, ಕರ್ಮಾರಾ ಮತ್ತು ದೆಗ್ವಾರ್ ವಲಯಗಳಲ್ಲಿ ಪಾಕಿಸ್ತಾನವು ಅಪ್ರಚೋದಿತವಾಗಿ ಗುಂಡು-ಸಿಡಿಮದ್ದು ಹಾರಿಸಿತು. ಇದಕ್ಕೆ ಭಾರತೀಯ ಸೇನೆಯು ಸಕ್ಷಮವಾಗಿ ತಿರುಗೇಟು ನೀಡಿದೆ.
ಇಂದು ಮುಂಜಾನೆ, ಪಾಕಿಸ್ತಾನವು ಕೃಷ್ಣ ಘಾಟಿ ವಲಯದಲ್ಲಿ ಗುಂಡು-ಸಿಡಿಮದ್ದು ಹಾರಿಸತೊಡಗಿತು. ಬೆಳಿಗ್ಗೆ ಆರು ಘಂಟೆಗೆ ಆರಂಭವಆದದ್ದು ಸುಮಾರು ೧ ತಾಸಿನ ನಂತರ ಅಂತ್ಯಗೊಂಡಿತು. ಮಧ್ಯಾಹ್ನ .೧೫ರ ಸುಮಾರಿಗೆ ರಾಜೌರಿಯ ನೌಶೇರಾ ವಲಯದಲ್ಲಿ ಮತ್ತೆ ಗುಂಡು-ಮದ್ದು ಹಾರಿಸತೊಡಗಿತು. ಇದು ಸಹ ಸ್ವಲ್ಪ ಸಮಯದ ನಂತರ ಅಂತ್ಯಗೊಂಡಿತು.
ಮುರನೆಯ ಬಾರಿ ಮಧ್ಯಾಹ್ನ ೩ ಘಂಟೆಗೆ ಪಾಕಿಸ್ತಾನದಿಂದ ಮತ್ತೆ ಗುಂಡು-ಸಿಡಿಮದ್ದು. ಈ ಮೂರು ಬಾರಿಯೂ ಭಾರತವು ಸರಿಯಾಗಿ ತಿರುಗೇಟು ನೀಡುವಲ್ಲಿ ಸಫಲವಾಯಿತು.
