ಭೂಮಿಯಿಂದ ಮೇಲಕ್ಕೆ ಹಾರುವ ದೀರ್ಘ ವ್ಯಾಪ್ತಿಯ ಕ್ಷಿಪಣಿ (ಎಲ್ಆರ್ಎಸ್ಎಎಂ) ಯನ್ನು ಇಂದು ಐಎನ್ಎಸ್ ಚೆನ್ನೈ ಯುದ್ಧ ಹಡಗಿನಿಂದ ಪ್ರಯೋಗಿಸಿ ಸಾಫಲ್ಯ ಕಂಡಿತು.
ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ಗುರಿಯೊಂದರ ಮೇಲೆ ಇದನ್ನು ಪ್ರಯೋಗಿಸಲಾಯಿತು. ಕ್ಷಿಪಣಿಯು ಈ ಗುರಿಯನ್ನು ಒಂದೇ ಹೊಡೆತಕ್ಕೆ ನಾಶ ಮಾಡಿತು. ಇದರೊಂದಿಗೆ ಈ ಕ್ಷಿಪಣಿಯ ಎಲ್ಲಾ ಉದ್ದೇಶ್ಯಗಳನ್ನೂ ಪೂರೈಸಲಾಗಿದೆ.
ಎಲ್ಆರ್ಎಸ್ಎಎಂ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್ಡಿಒ) ಹಾಗೂ ಇಸ್ರೇಲ್ನ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಇಎಯು) ನ ಜಂಟಿ ಉತ್ಪನ್ನವಾಗಿದೆ.
ಈ ಕ್ಷಿಪಣಿಯ ಸಫಲ ಪ್ರಯೋಗಕ್ಕಾಗಿ ಕೇಂದ್ರೀಯ ರಕ್ನಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಕ್ಷಿಪಣಿ ತಯಾರಿಸಿ ಸಿದ್ಧಗೊಳಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
