ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದ ಪರಿಣಾಮ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಗಿರುವ ಘಟನೆ ವರದಿಯಾಗಿದೆ. ಮೂಲತಃ ಬಳ್ಳಾರಿಯವನೆಂದು ಹೇಳಿಕೊಂಡಿರುವ ರಾಮಣ್ಣ ಎಂಬಾತನೇ ಅವಘಡಕ್ಕೊಳಗಾಗಿ ಜೀವನ್ಮರಣದ ನಡುವೆ ಆಸ್ಪತ್ರಗೆ ಸೇರ್ಪಡೆಗೊಂಡಿರುವ ನತದೃಷ್ಟನಾಗಿದ್ದಾನೆ.
ಮೊಬೈಲ್ ತಂದ ಕುತ್ತು? ಚಿತ್ರನಟಿ ಶ್ವೇತಾ ಚಂಗಪ್ಪರವರ ಸಂಬಂಧಿಯಾಗಿರುವ ಕಾವೇರಪ್ಪ ಕಾಶಿರವರ ಗರ್ವಾಲೆಯಲ್ಲಿರುವ ತೋಟಕ್ಕೆ ರಾಮಣ್ಣ ಎಂಬಾತ ಕಳೆದ ಒಂದು ತಿಂಗಳ ಹಿಂದೆ ತಾನು ಬಳ್ಳಾರಿಯವನೆಂದು ಹೇಳಿಕೊಂಡು ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಂದು (ತಾ.2) ಮಾದಾಪುರ ಸಂತೆಗೆಂದು ಬಂದವನು ಮೊಬೈಲನ್ನು ತೋಟದ ಮಾಲೀಕರ ಸಂಬಂಧಿಯಿಂದ ಖರೀದಿಸಿಕೊಂಡಿದ್ದ ಎನ್ನಲಾಗಿದೆ. ಹೊಸ ಮೊಬೈಲ್ ಸಿಕ್ಕಿದ ಸಂಭ್ರಮದಲ್ಲಿ ಈತ ಮಾದಾಪುರ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಮೊಬೈಲಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬಯಲುಕೊಪ್ಪದಿಂದ ಮಾದಾಪುರ ಸಮೀಪದ ಜಂಬೂರುವಿನಲ್ಲಿ ನಿರಾಶ್ರಿತರಿಗೆ ನಿರ್ಮಾಣವಾಗುತ್ತಿರುವ ಮನೆಯ ಕೆಲಸಕ್ಕೆಂದು ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯ ಹಿಂಬದಿ ಚಕ್ರ ರಾಮಣ್ಣನ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡು ಚಿಂತಾಜನಕನಾದ ಈತನನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರವಾಯಿತೇ ಗೂಗಲ್ ಮ್ಯಾಪ್? ಈ ಅವಘಡಕ್ಕೆ ಕಾರಣವಾಗಿರುವ ಕಾಂಕ್ರೀಟ್ ಮಿಶ್ರಣವನ್ನು ಸಾಗಿಸುತ್ತಿದ್ದ ಲಾರಿಯ ಚಾಲಕ ಕೂಡ ಮೊಬೈಲ್ ವೀಕ್ಷಣೆಯಲ್ಲಿದ್ದು ಮಾರ್ಗದ ಅರಿವಿಗಾಗಿ ಗೂಗಲ್ ಮ್ಯಾಪ್ ಅನ್ನು ನೋಡುತ್ತಿದ್ದ ಎನ್ನಲಾಗಿದೆ. ಈ ಪ್ರಮಾದದಿಂದಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಲಾರಿಯ ಚಕ್ರ ಹರಿಯುವಂತಾಯಿತು ಎಂದು ಹೇಳಲಾಗಿದೆ.
ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದ ಪರಿಣಾಮ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಗಿರುವ ಘಟನೆ ವರದಿಯಾಗಿದೆ. ಮೂಲತಃ ಬಳ್ಳಾರಿಯವನೆಂದು ಹೇಳಿಕೊಂಡಿರುವ ರಾಮಣ್ಣ ಎಂಬಾತನೇ ಅವಘಡಕ್ಕೊಳಗಾಗಿ ಜೀವನ್ಮರಣದ ನಡುವೆ ಆಸ್ಪತ್ರಗೆ ಸೇರ್ಪಡೆಗೊಂಡಿರುವ ನತದೃಷ್ಟನಾಗಿದ್ದಾನೆ.
ಮೊಬೈಲ್ ತಂದ ಕುತ್ತು? ಚಿತ್ರನಟಿ ಶ್ವೇತಾ ಚಂಗಪ್ಪರವರ ಸಂಬಂಧಿಯಾಗಿರುವ ಕಾವೇರಪ್ಪ ಕಾಶಿರವರ ಗರ್ವಾಲೆಯಲ್ಲಿರುವ ತೋಟಕ್ಕೆ ರಾಮಣ್ಣ ಎಂಬಾತ ಕಳೆದ ಒಂದು ತಿಂಗಳ ಹಿಂದೆ ತಾನು ಬಳ್ಳಾರಿಯವನೆಂದು ಹೇಳಿಕೊಂಡು ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಂದು (ತಾ.2) ಮಾದಾಪುರ ಸಂತೆಗೆಂದು ಬಂದವನು ಮೊಬೈಲನ್ನು ತೋಟದ ಮಾಲೀಕರ ಸಂಬಂಧಿಯಿಂದ ಖರೀದಿಸಿಕೊಂಡಿದ್ದ ಎನ್ನಲಾಗಿದೆ. ಹೊಸ ಮೊಬೈಲ್ ಸಿಕ್ಕಿದ ಸಂಭ್ರಮದಲ್ಲಿ ಈತ ಮಾದಾಪುರ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಮೊಬೈಲಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬಯಲುಕೊಪ್ಪದಿಂದ ಮಾದಾಪುರ ಸಮೀಪದ ಜಂಬೂರುವಿನಲ್ಲಿ ನಿರಾಶ್ರಿತರಿಗೆ ನಿರ್ಮಾಣವಾಗುತ್ತಿರುವ ಮನೆಯ ಕೆಲಸಕ್ಕೆಂದು ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯ ಹಿಂಬದಿ ಚಕ್ರ ರಾಮಣ್ಣನ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡು ಚಿಂತಾಜನಕನಾದ ಈತನನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರವಾಯಿತೇ ಗೂಗಲ್ ಮ್ಯಾಪ್? ಈ ಅವಘಡಕ್ಕೆ ಕಾರಣವಾಗಿರುವ ಕಾಂಕ್ರೀಟ್ ಮಿಶ್ರಣವನ್ನು ಸಾಗಿಸುತ್ತಿದ್ದ ಲಾರಿಯ ಚಾಲಕ ಕೂಡ ಮೊಬೈಲ್ ವೀಕ್ಷಣೆಯಲ್ಲಿದ್ದು ಮಾರ್ಗದ ಅರಿವಿಗಾಗಿ ಗೂಗಲ್ ಮ್ಯಾಪ್ ಅನ್ನು ನೋಡುತ್ತಿದ್ದ ಎನ್ನಲಾಗಿದೆ. ಈ ಪ್ರಮಾದದಿಂದಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಲಾರಿಯ ಚಕ್ರ ಹರಿಯುವಂತಾಯಿತು ಎಂದು ಹೇಳಲಾಗಿದೆ.
ಮೂಲ: ಕ್ಯೂಟ್ ಕೂರ್ಗ್ ನ್ಯೂಸ್, ಸುಂಟಿಕೊಪ್ಪ
