ಇಬ್ಬರು ಸಿಪಿಎಂ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಕೊಡಿಸುವ ನಿಟ್ಟಿನಲ್ಲಿ ಶಬರಿಮಲೆ ದೇವಸ್ವೊಮ್ ಮಂಡಳಿಯು ಬಹಳ ಕೀಳುಮಟ್ಟಕ್ಕೆ ಇಳಿಯಿತು.
ಬಿಂದು ಅಮ್ಮಣ್ಣಿ (ವಕೀಲೆ) ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಮುಂಜಾನೆ ೩.೪೫ಕ್ಕೆ ಪೊಲೀಸರ ಬಿಗಿ ಭದ್ರತೆಯೊಂದಿಗೆ ಶಬರಿಮಲೆ ದೇಗುಲದ ಉತ್ತರ ದ್ವಾರದಿಂದ ಒಳಹೊಕ್ಕರು. ಈ ದ್ವಾರವನ್ನು ದೇವಸ್ವೊಮ್ ಮಂಡಳಿ ಸದಸ್ಯ್ರರ ವಿಶೇಷ ದರ್ಶನಕ್ಕಾಗಿ ಮೀಸಲಿಡಲಾಗಿದೆ. ಈ ಇಬ್ಬರು ಮಹಿಳೆಯರನ್ನು ಹೊಸವರ್ಷ ದಿನದಂದು ಪಂಪಾದಿಂದ ಆಂಬ್ಯುಲೆನ್ಸ್ನಲ್ಲಿ ಕದ್ದುಮುಚ್ಚಿ ಕರೆತರಲಾಯಿತು.
ಹಿಂದೂಗಳ ಒಗ್ಗಟ್ಟನ್ನು ಮುರಿದು ಪ್ರಚಾರ ಗಿಟ್ಟಿಕೊಳ್ಳುವ ಉದ್ದೇಶದಿಂದ ಈ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸುತ್ತಿದ್ದಾರೆ ಎಂಬುದು ಈ ವೀಡಿಯೊ ಮೂಲಕ ರುಜುವಾತಾಗಿದೆ. ಈ ತರಹದ ಕೀಳುಮಟ್ಟದ ಕೃತ್ಯಗಳಿಂದ ಹಿಂದೂ ಒಗ್ಗಟ್ಟು ಮತ್ತು ಅಯ್ಯಪ್ಪ ಸ್ವಾಮಿ ಭಕ್ತರ ನಂಬಿಕೆಗಳಿಗೆ ಧಕ್ಕೆಯಾಗುವುದಿಲ್ಲ.
“ಈ ಇಬ್ಬರು ಮಹಿಳೆಯರು ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಬಂದಿರುವುದರಿಂದ ಪಾಪವುಂಟಾಗಿದೆ. ಈ ದೋಷವನ್ನು ಸರಿಪಡಿಸಲು ಅಯ್ಯಪ್ಪಸ್ವಾಮಿ ದೇಗುಲವನ್ನು ಮುಚ್ಚಿ ಶುದ್ಧೀಕರಣ ಮಾಡಲಾಗುವುದು” ಎಂದು ಅಯ್ಯಪ್ಪ ಸ್ವಾಮಿ ದೇಗುಲದ ವ್ಯವಸ್ಥಾಪಕ (ತಂತ್ರಿ) ತಿಳಿಸಿದರು.
ಆ ಇಬ್ಬರು ಮಹಿಳೆಯರ ಹೇಯ ಕೃತ್ಯದಿಂದ ತಂತ್ರಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತರೆಲ್ಲರೂ ಸಿಡಿಮಿಡಿಗೊಂಡಿದ್ದಾರೆ.ಆದರೂ ಈ ಕೃತ್ಯದಿಂದ ಇವರು ಸ್ಥೈರ್ಯ ಕಳೆದುಕೊಂಡಿಲ್ಲ.
