ಆಧಾರ್ ಕಾಯಿದೆ ೨೦೧೬, ಅಕ್ರಮ ಹಣ ವರ್ಗವಣೆ ತಡೆ ಕಾಯಿದೆ ೨೦೦೫ ಹಾಗೂ ಭಾರತೀಯ ಅಂಚೆತಂತಿ ಕಾಯಿದೆ ೧೮೮೫ – ಈ ಮೂರಕ್ಕೂ ತಿದ್ದುಪಡಿ ತರುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರದ ಸಂಪುಟವು ಅಉಮೋದಿಸಿದೆ.
೨೦೧೯ರ ಜನವರಿ ೪ರಂದು ಲೋಕಸಭೆಯಲ್ಲಿ ಅನುಮೋದಿಸಲಾದ ಮಸೂದೆಯಲ್ಲಿರುವ ತಿದ್ದುಪಡಿಗಳು ಹಾಗೂ ಪ್ರಸ್ಥಾಪಿತ ತಿದ್ದುಪಡಿಗಳು ಒಂದೇ ರೀತಿಯದಾಗಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ನಿಮಿತ್ತ ನಡೆದ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದರು.
ಈ ತಿದ್ದುಪಡಿಯ ಮೂಲಕ, ಆಧಾರ್ ಪ್ರಾಧಿಕಾರ (UIDAI) ಸಾರ್ವಜನಿಕರಿಗೆ ಸೇವೆ ಒದಗಿಸಲು ಸದೃಢ ವ್ಯವಸ್ಥೆ ಕಲ್ಪಿಸಲಿದೆ. ಆಧಾರ್ ಮಾಹಿತಿ ದುರುಪಯೊಗವನ್ನು ತಡೆಗಟ್ಟುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ.
ಹೊಸ ತಿದ್ದುಪಡಿಯ ಫಲವಾಗಿ, ಸಂಸತ್ನಲ್ಲಿ ಕಾನುನಿನ ಮೂಲಕ ಸೂಚಿಸದಿದ್ದಲ್ಲಿ, ವ್ಯಕ್ತಿಯೊಬ್ಬ ತನ್ನ ಅಧಾರ್ ದಾಖಲೆ ಲಗತ್ತಿಸಲು ಕಡ್ಡಾಯವಾಗಿರುವಂತಿಲ್ಲ. ಖಾಸಗಿತನದ ಹಕ್ಕನ್ನು ರಕ್ಷಿಸಲು ಆಧಾರ್ ಕಾಯಿದೆ ಮತ್ತು ನಿರ್ಬಂಧನೆಗಳ ಕೆಲ ವಿಧಿಗಳನ್ನು ರದ್ದುಗೊಳಿಸಲಾಯಿತು.
ಹಿಂದೆ ಆಧಾರ್ ಮಾಹಿತಿ ಶೇಖರಿಸಲಾಗಿರುವ ಸರ್ವರ್ಗಳು ಎಲ್ಲಿರುತ್ತವೋ ಎಂಬುದರ ಬಗ್ಗೆ ಸಾರ್ವಜನಿಕರು ತಳಮಳ ವ್ಯಕ್ತಡಿಸಿಸಿದ್ದರು. ವಿದೇಶದಲ್ಲಿದ್ದಲ್ಲಿ ಖಾಸಗಿತನ ಹಕ್ಕು ಉಲ್ಲಂಘನೆಯಾಗುವುದು ಎಂಬ ಅವರು ತಳಮಳ ವ್ಯಕ್ತಡಿಸಿದ್ದರು.
