ಫೆಬ್ರುವರಿ ೧೪ರಂದು ಪುಲ್ವಾಮಾ ಜಿಲ್ಲೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಧಾಳಿಗೆ ತುತ್ತಾಗಿ ಹುತಾತ್ಮರಾದ ೪೦ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಸಹಾಯ ಧನವನ್ನು ಮಾತಾ ಅಮೃತಾನಂದಮಯಿ ಮಠವು ನೀಡಲಿದೆ.
“ಈ ದೇಶವನ್ನು ರಕ್ಷಿಸುವ ಧರ್ಮವನ್ನು ಪಾಲಿಸುತ್ತಿರುವಾಗ ಹುತಾತ್ಮರಾದ ಈ ಧೀರ ಯೋಧರ ಕುಟುಂಬಗಳಿಗೆ ಸಹಾಯ ಮಾಡುವುದು ನಮ್ಮ ಧರ್ಮ” ಎಂದು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ಹೇಳಿದರು.”ಅವರ ಕುಟಂಬಗಳು ಮತ್ತು ನಿಕಟದವರಿಗೆ ನಮ್ಮ ಸಾಂತ್ವನಗಳನ್ನು ತಿಳಿಸುವೆ. ಅವರ ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸೋಣ” ಎಂದು ಹೇಳಿದರು.
೨೦೧೯ರ ಬಾರತ ಯಾತ್ರೆಯ ಅಂಗವಾಗಿ ಮೈಸೂರಿಗೆ ಪ್ರಯಾಣ ಬೆಳಿಸುತ್ತಿರುವ ವೇಳೆಯಲ್ಲಿ ಮಾತಾ ಅಮೃತಾನಂದಮಯಿ ಮಠದಿಂದ ಈ ಘೋಷಣೆಯು ಬಂದಿತು.
ಈಗಾಗಲೇ ಬಹಳಷ್ಟು ಕಡೆಗಳಿಂದ ಹುತಾತ್ಮರ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸಹಾಯ ತಲುಪಿಸುವ ಘೋಷಣೆಗಲಾಗಿವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
