ಸರಳ ಜೀವನದ, ಅಹಂಕಾರದ ಲವಲೇಶವೇ ಇಲ್ಲದ ಬಂದವರಿಗೆಲ್ಲ ತಮ್ಮ ವಂಶ ಪಾರಂಪರ್ಯವಾಗಿ ಬಂದ ನಾಟಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ ವೈದ್ಯನಾರಾಯಣ ಮೂತಿ೯ಯವರಿಗೆ ಇತ್ತೀಚಿನ ವರ್ಷದಲ್ಲಿ ವಿಪರೀತ ಸಂಖ್ಯೆಯಲ್ಲಿ ಬರುವ ರೋಗಿಗಳಿಂದ ಅನೇಕ ಕಷ್ಟಗಳೂ ಎದುರಿಸುವಂತಾಯಿತು.
ಅವರ ಔಷದಕ್ಕೆ ಬೇಕಾಗುತ್ತಿದ್ದದ್ದು ದೊಡ್ಡ ಮರಗಳಲ್ಲ ಸಣ್ಣ ಕುರುಚಲು ಔಷದ ಅಂಶದ ಸಸ್ಯಗಳು ಮಾತ್ರ, ಅವರು ಹೇಳುತ್ತಿದ್ದಂತೆ ಇಡೀ ವಿಶ್ವದ ಜನರಿಗೂ ಕೊಟ್ಟರೂ ಖಾಲಿ ಆಗದಷ್ಟು ನಮ್ಮ ಪಶ್ಚಿಮ ಘಟ್ಟದ ಅಂಚಿನಲ್ಲಿದೆ ಎನ್ನುತ್ತಿದ್ದರು.
ಆದರೆ ಇವರಿಂದ ಅರಣ್ಯ ನಾಶ, ಪರಿಸರ ನಾಶ ಎಂದೆಲ್ಲ ಹಸಿರು ನ್ಯಾಯಾಲಯದಲ್ಲಿ ಇವರ ವಿರುದ್ದ ಹಾಕಿದ್ದ ಕೇಸ್ ನ್ಯಾಯಾದೀಶರು ಸತ್ಯಾಂಶ ಪರಾಮರಿಸಿ ವಜಾ ಮಾಡಿದ್ದರು.
ಅನೇಕ ಸುಳ್ಳು ಕೇಸುಗಳು ಇವರ ಮೇಲೆ ಇವರನ್ನ ದ್ವೇಷಿಸುವವರು ದಾಖಲಿಸಿದ್ದು ಕೂಡ ಇವರನ್ನ ಅನಾವಶ್ಯಕ ತೊಂದರೆಗೆ ಕಾರಣ ಆಗಿತ್ತು.
ಇವರ ಚಿಕಿತ್ಸೆಯಿಂದ ಯಾರಿಗೂ ಗುಣ ಆಗಿಲ್ಲ ಅಂತೆಲ್ಲ ಹೇಳುವವರೇ ಇದ್ದಾರೆ ಆದರೆ ಅಲೋಪತಿಯಲ್ಲಿಯೂ ಗುಣ ಆಗದೆ ಅಂತಿಮ ಹಂತದಲ್ಲಿ ಇವರಲ್ಲಿಗೆ ಬಂದು ಗುಣ ಆದ ಸಾವಿರಾರು ದಾಖಲೆ ನಾನೇ ಸಂಗ್ರಹಿಸಿದ್ದೇನೆ.
ಇವರು ಮತ್ತು ನನ್ನ ತಂದೆ ಗಳಸ್ಯ ಕಂಠಸ್ಯದ ಗೆಳೆಯರು, ಇವರ ಚಿಕಿತ್ಸಾ ಕೇಂದ್ರಕ್ಕೆ ಒಂದು ಕಾಣಿಕೆ ಹುಂಡಿ ನನ್ನ ತಂದೆ ಕೊಡುಗೆ ಆಗಿ ನೀಡಿದ್ದರು ಸುಮಾರು 30 ವರ್ಷದಿಂದ ಅವರ ನೆನಪಿಗಾಗಿ ಅದು ಈಗಲೂ ಅಲ್ಲೇ ಇದೆ.
ನನ್ನ ತಂದೆ ನಂತರ ನಾನು ಇವರಿಗೆ ಆಪ್ತನಾಗಿದ್ದು ನನ್ನ ಬಾಗ್ಯ, ನಾವೆಲ್ಲ ಇವರನ್ನ ಸಣ್ಣಯ್ಯ ಹೆಗ್ಗಡೆಯವರೆಂದೇ ಕರೆಯುವುದು.
ಈ ಕಾರಣದಿಂದ ವಿಶ್ವದ ಹೆಸರಾಂತ ವೈದ್ಯರು, ವಿಜ್ಞಾನಿಗಳು, ವಿದೇಶಿ ಪತ್ರಕರ್ತರು, ಉದ್ದಿಮೆದಾರರು ಮತ್ತು ಔಷದ ತಯಾರಕರು ಇವರನ್ನ ಬೇಟಿ ಮಾಡಲು ಮತ್ತು ಅವರಿಗೆ ದ್ವಿಬಾಷಿಯಾಗಿ ಸಂವಾದ ಮಾಡಲು ನನ್ನನ್ನೆ ಅವಲ೦ಬಿಸುತ್ತಿದ್ದರು ಇದರಿಂದ ಪ್ರಸಕ್ತ ಚಿಕಿತ್ಸೆಗಳ ಬಗ್ಗೆ ಬೇರೆ ಬೇರೆ ದೇಶಗಳ ಮಾಹಿತಿ ನನಗೆ ದೊರೆಯುವಂತಾಯಿತು ಮತ್ತು ಅವರೆಲ್ಲರ ಸಂಪಕ೯ ಸಾಧ್ಯವಾಯಿತು.
ಸಾವಿರಾರು ವರ್ಷದ ಹಿಂದಿನಿಂದ ಈ ಕುಟುಂಬ ವೈದ್ಯ ಕುಟುಂಬ ಆಗಿದೆ, 800 ವರ್ಷದ ಹಿಂದೆ ತಮಿಳುನಾಡಿನ ಕುಂಬಕೋಣದ ರಾಜ ವೈದ್ಯ ಕುಟುಂಬ ಒ0ದು ಕನ್ನಡ ನಾಡಿನ ಕದಂಬ ರಾಜರ ಕುಟುಂಬದ ರಾಜ ವೈದ್ಯರಾಗಿ ಬಂದು ಸೇರಿದ ಕುಟುಂಬಕ್ಕೆ ಸೇರಿದವರು ವೈದ್ಯನಾರಾಯಣ ಮೂತಿ೯ಗಳು ಹಾಗಾಗಿ ಇವರ ರಕ್ತದಲ್ಲಿ ವೈದ್ಯರ ಅಂಶವಿದೆ, ಪರಂಪರೆ ಇದೆ.
ಬಾಲ್ಯದಲ್ಲಿ ಬಲು ಬಡತನ ಇವರಿಗೆ 7 ವಷ೯ ಇದ್ದಾಗ ಇವರ ತಂದೆ ಮರದಿಂದ ಬಿದ್ದು ಮೃತರಾಗುತ್ತಾರೆ ಅದಕ್ಕೂ ಮೊದಲೆ ಇವರ ತಾಯಿ ಕಾಯಿಲೆಯಿ೦ದ ಇವರನ್ನ ತಬ್ಬಲಿ ಮಾಡಿ ಹೋಗಿರುತ್ತಾರೆ ಇವರಿಗಿಂತ ದೊಡ್ಡವರಾದ ಸಹೋದರಿ ಇವರನ್ನೆಲ್ಲ ಸಾಕಿ ಸಲುಹಿದ್ದಾಗಿ ನೆನಪು ಮಾಡುತ್ತಿದ್ದರು.
Pingback: ks pod
Pingback: super kaya 88
Pingback: matte vloeibare lippenstift