1.ಲಾಕ್ ಡೌನ್ ಸಂದರ್ಭದಲ್ಲಿ ಬಡ ಜನರಿಗೆ “ಉಚಿತ ಹಾಲು” ನೀಡುವ ಯೋಜನೆಗೆ ಚಾಲನೆ ನೀಡಿ, ಸಾಗರ ನಗರ ವ್ಯಾಪ್ತಿಯ ಸ್ಲಂ ನಿವಾಸಿಗಳಿಗೆ,ಕಟ್ಟಡ ಮತ್ತ ಕೂಲಿ ಕಾರ್ಮಿಕರಿಗೆ ಹಾಲು ವಿತರಿಸಲಾಯಿತು.
2.ಸಾಗರ ನಗರಸಭೆ 13 ನೇ ವಾರ್ಡ್ ನ ಬೂತ್ ನಂ 64 ರ ಬಿಜೆಪಿ ಕಾರ್ಯಕರ್ತರು,ನಗರಸಭೆ ಸದಸ್ಯರು, ಹಾಗೂ ಪಕ್ಷದ ಮುಖಂಡರುಗಳು, ಮಾನ್ಯ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ (ಕೋವಿಡ್-19 ಪರಿಹಾರ ನಿಧಿ) 34 ಸಾವಿರ ದೇಣಿಗೆ ನೀಡಿದರು.
3.ಹೊಸನಗರ ಪ.ಪಂ ವ್ಯಾಪ್ತಿಯ ಸ್ಲಂ ನಿವಾಸಿಗಳಿಗೆ,ಕಟ್ಟಡ ಕಾರ್ಮಿಕರಿಗೆ ಮತ್ತ ಕೂಲಿ ಕಾರ್ಮಿಕರಿಗೆ ಉಚಿತ ಹಾಲು ವಿತರಿಸಲಾಯಿತು.
4.ಹೊಸನಗರ ತಾಲ್ಲೂಕಿನಲ್ಲಿ ಕೊರೋನ ಕಾಯಿಲೆ ನಿರ್ಮೂಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ, ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಿ.ನಂತರ
ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯ ಫಲಾನುಭವಿಗಳಾದ ಗುಳಿಗುಳಿ ಶಂಕರದ “ಸಂದೀಪ್ ಬಿನ್ ವಾಸುದೇವ” ರವರಿಗೆ ಪರಿಹಾರ ನಿಧಿಯ 67,869 ರೂ ಗಳ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೊಸನಗರ ತಹಶೀಲ್ದಾರ್ ಶ್ರೀ ರಾಜೀವ್ ರವರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣ್ ರವರು, ಮೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರಾದ ವೆಂಕಟೇಶ್ ರವರು, ವೃತ್ತ ನಿರೀಕ್ಷರದ ಗುರಣ್ಣ ಹೆಬ್ಬಾಳ ರವರು, ಪ.ಪಂ ಮುಖ್ಯಾಧಿಕಾರಿ ಬಾಲಚಂದ್ರ ರವರು ಮತ್ತಿತರರು ಉಪಸ್ಥಿತರಿದ್ದರು.
By Author Goutham K S
