ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ ೧ರಂದು ೪೮ನೆಯ ವರ್ಷದ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.
ಸಂಜೆ ೬.೪೮ಕ್ಕೆ ಗೋಧೂಳಿ ಲಗ್ನದಲ್ಲಿ ವಿವಾಹವಾಗಲಿದ್ದಾರೆ. ಸಾಮೂಹಿಕ ವಿವಾಹವಾಗಲಿಚ್ಛಿಸುವವರು ಏಪ್ರಿಲ್ ೨೫ರೊಳಗೆ ತಮ್ಮ ಎಲ್ಲ ಮಾಹಿತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮದುವೆಯ ಸಮಾರಂಭದಲ್ಲಿ ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಲಸೂತ್ರ ನೀಡಲಾಗುತ್ತದೆ.
ಯಾವುದೇ ಕಾರಣ ಹಾಗೂ ಸಂದರ್ಭದಲ್ಲಿ ಎರಡನೆಯ ವಿವಾಹಕ್ಕೆ ಅವಕಾಶವಿಲ್ಲ. ವಿವಾಹದ ಎಲ್ಲಾ ವೆಚ್ಚವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಾಗುತ್ತದೆ.
ವರದಕ್ಷಿಣೆಯ ಪಿಡುಗು ಹಾಗೂ ಮದುವೆಗಾಗುವ ಅನಗತ್ಯ ದುಂದು ವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ೧೯೭೨ರಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಆರಂಭಿಸಿದ್ದರು. ಅಂದಿನಿಂದಲೂ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಇದುವರೆಗೂ ೧೨೧೬೦ ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿವೆ.
ಕೃಪೆ: One India Kannada
