ನವದೆಹಲಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಟಿಟಿಇ (Travelling Ticket Examiner) ಯೊಬ್ಬರು ಹೆರಿಗೆ ಮಾಡಿಸಿ ಮಾನವೀಯತೆ ಮೆರೆದು ಬೇಷ್ ಎನಿಸಿಕೊಂಡಿದ್ದಾರೆ.
ಹೌದು. ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಹೆರಿಗೆಯಾಗಿರುವ ಬಗ್ಗೆ ಹಲವು ಸುದ್ದಿಗಳನ್ನು ನೋಡಿರಬಹುದು. ದೆಹಲಿ ವಿಭಾಗದ ರೈಲ್ವೇ ಟಿಟಿಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎಸ್. ರಾಣಾ ಅವರು ಕಾರ್ಯಕ್ಕೆ ರೈಲ್ವೇ ಇಲಾಖೆ ಬೇಷ್ ಎಂದಿದೆ. ರೈಲಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಕೊಂಡಿತ್ತು. ಈ ವೇಳೆ ರೈಲಿನಲ್ಲಿ ವೈದ್ಯರು ಇಲ್ಲದ ಕಾರಣ ರಾಣಾ ಅವರೇ ಇತರೇ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ. ಟಿಟಿಇ ಈ ಕೆಲಸವನ್ನು ಭಾರತೀಯ ರೈಲ್ವೆ ಇಲಾಖೆ ಮೆಚ್ಚಿದೆ. ರಾಣಾ ಅವರ ಮಾನವೀಯ ಮತ್ತು ಉದಾತ್ತ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರೈಲ್ವೇ ಸಚಿವಾಲಯವು ಟ್ವೀಟ್ ಮಾಡಿ ಸಿಬ್ಬಂದಿ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಿದೆ.

ಟ್ವೀಟ್ನಲ್ಲಿ ಏನಿದೆ?
ಭಾರತೀಯ ರೈಲ್ವೇ ಇಲಾಖೆ ಪ್ರಯಾಣಿಕರ ಮೊಗದಲ್ಲಿ ನಗು ಮೂಡಿಸಿದೆ. ದೆಹಲಿ ವಿಭಾಗದ ಟಿಟಿಇ ಎಚ್.ಎಸ್ ರಾಣಾ ಅವರು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ರಾತ್ರಿ ಇತರೆ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ. ರೈಲಿನಲ್ಲಿ ವೈದ್ಯರು ಇರದ ಕಾರಣ ಅವರೇ ಹೆರಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಬರೆದು ಟ್ವೀಟ್ ಮಾಡಿದೆ.
