ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಾಲ್ಕೂವರೆ ವರ್ಷಗಳಿಂದ ಚಾಲಿಸಿದ ಹಲವು ಯೋಜನೆಗಳು ವಿಶ್ವದೆಲ್ಲೆಡೆ ಗಮನ ಮತ್ತು ಮೆಚ್ಚುಗೆ ಸಂಪಾದಿಸಿವೆ. ಹಲವು ವಿಶ್ವ ವಿಖ್ಯಾತ ಗಣ್ಯರ ಪೈಕಿ ವಿಶ್ವದಲ್ಲೇ ಅತಿ ಶ್ರೀಮಂತ ವ್ಯಕ್ತಿ ಹಾಗೂ ಮೈಕ್ರೊಸಾಫ್ಟ್ ಸಂಸ್ತಾಪಕ ಬಿಲ್ ಗೇಟ್ಸ್ ಸಹ ಒಬ್ಬರು.
ಭಾರತ ಸರ್ಕಾರ ವಿಶಿಷ್ಟ ಗುರುತಿನ “ಆಧಾರ್” ಅಪಾರ ಮಹತ್ವ ಗಳಿಸಿಕೊಂಡಿತು. ಹಣಕಾಸು ಲೇವಾದೇವಿ, ಭೂ ಕೊಳ್ಳುವಿಕೆ, ನೋಂದಣಿ, ಬ್ಯಾಂಕ್ ಖಾತೆ ಆರಂಭಿಸುವಿಕೆ ಮತ್ತು ನಿರ್ವಹಣೆ ಸೇರಿದಂತೆ ಹಲವಾರು ಸರ್ಕಾರ-ಸಂಬಂಧಿತ ವಿಚಾರಗಳಿಗೆ ಆಧಾರ್ ಜೋಡಿಸುವುದು ಕಡ್ಡಾಯವಾಯಿತು.
ಆಧಾರ್ ಯೋಜನೆ ಬಿಲ್ ಗೇಟ್ಸ್ರ ಗಮನ ಸೆಳೆಯಿತು. ಬಿಲ್ ಗೇಟ್ಸ್ ಆಧಾರ್ ಯೋಜನೆಯನ್ನು ಅಧ್ಯಯನ ಮಾಡಿ ಪ್ರಶಂಸಿಸಿದರು, “ಆಧಾರ್ ಯಾವುದೇ ಖಾಸಗಿತನಕ್ಕೆ ಯಾವುದೇ ತೊಂದರೆಯಾಗದು” ಎಂದರು. ವಿಶ್ವ ಬ್ಯಾಂಕ್ ಇತರೆ ರಾಷ್ಟ್ರಗಳಲ್ಲಿ ಕೈಗೊಳ್ಳುತ್ತಿರುವ ಇದೇ ರೀತಿಯ ನೋಂದಣಿ ಯೋಜನೆಯನ್ನು ತಮ್ಮ ಸಂಸ್ಥೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಮೂಲಕ ಹಣದ ನೆರವು ನೀಡುತ್ತಿದೆ.
ಭಾರತ ಸರ್ಕಾರವು ಸುಮಾರು ಮೂರು ತಿಂಗಳ ಹಿಂದೆ ೧೦ ಕೋಟಿಗಿಂತಲೂ ಹೆಚ್ಚು ಮಂದಿ ಬಡ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತಹ ಮಹತ್ತರವಾದ “ಆಯುಷ್ಮಾನ್ ಭಾರತ್” ಎಂಬ ಆರೋಗ್ಯ ಯೋಜನೆ ಚಾಲಿಸಿತು. ಇದಾದ ೧೦೦ ದಿನಗಳಲ್ಲೇ ೬,೮೫,೦೦೦ ಫಲಾನುಭವಿಗಳು ಉಚಿತ ಆರೋಗ್ಯ ಯೋಜನೆ ಸೌಲಭ್ಯ ಪಡೆದ ಮಾಹಿತಿಯನ್ನು ಕೇಂದ್ರೀಯ ಆರೋಗ್ಯ ಮಂತ್ರಿ ಜಗತ್ ಪ್ರಕಾಶ್ ನಡ್ಡಾ ಟ್ವೀಟ್ ಮಾಡಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರ, ಆಯುಷ್ಮಾನ್ ಕಾರ್ಯಾಲಯ ಮತ್ತು ಪ್ರಧಾನಿ ಕಾರ್ಯಲಯವನ್ನು ಅಭಿನಂದಿಸಿ, “ನೂರು ದಿನಗಳಲ್ಲಿ ಆಯುಷ್ಮಾನ್ ಭಾರತ್ ಇಷ್ಟೊಂದು ಜನರನ್ನು ತಲುಪಿರುವುದು ಮಹಾನ್ ಸಾಧನೆ” ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದರು.
