*ಸ್ವಲ್ಪ ದಿನ ತಾಳಿ ಈ ವೈರಸ್ ಏನಾದರೂ ವಿಕೋಪಕ್ಕೆ ಹೋದರೆ ಎಲ್ಲಾ ರಾಜ್ಯಗಳು ಒಂದಾಗಿ ಇದನ್ನ ಎದುರಿಸುವುದು ಬಿಟ್ಟು ಯಾವ ಗಡಿಯೂ ಇರುವುದಿಲ್ಲ”
ಗಡಿನಾಡಾದ ಕಾಸರಗೋಡಿನ ಕನ್ನಡಿಗರ ಈ ಪ್ರತಿಕ್ರಿಯೆ ಓದಿ.....
"ಆಗುವುದೆಲ್ಲ ಒಳ್ಳೆಯದಕ್ಕೇ.....
ಮಂಗಳೂರು ಲೋಕಸಭಾ ಸದಸ್ಯರು ಕಾಸರಗೋಡು ಗಡಿ ಬಂದ್ ಮಾಡಿರುವುದಕ್ಕೆ ಕಾಸರಗೋಡಿನವರೆಗೆ ಒಳ್ಳೆಯದೇ ಆಯ್ತು ..
ಭಾರತದ ಬೃಹತ್ ಉದ್ಯಮ ಸಂಸ್ಥೆಯಾದ ಟಾಟಾ ಸಮೂಹದಿಂದ 540 bed ಗಳುಳ್ಳ ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೂರು ತಿಂಗಳೊಳಗಾಗಿ ನಿರ್ಮಾಣ ಮಾಡಲು ಟಾಟಾ ಸಂಸ್ಥೆಯ ಆಡಳಿತಾಧಿಕಾರಿಗಳು ಒಪ್ಪಿರುತ್ತಾರೆ …ಇದರಿಂದಾಗಿ ಮಂಗಳೂರಿನ ಬೃಹತ್ ಆಸ್ಪತ್ರೆಗಳ ಹಬ್ ಎಂದು ಪ್ರಸಿದ್ಧಿ ಹೊಂದಿ ಮಂಗಳೂರಿಗೆ ದೇಶ ವಿದೇಶಗಳಿಂದಲೂ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವವರು ಹಾಗೂ ಕಾಸರಗೋಡಿನ ಮತ್ತು ಕಾಸರಗೋಡು ಸಮೀಪವಿರುವ ಜಿಲ್ಲೆಗಳಿಂದಲೂ ಅತ್ಯಧಿಕ ರೋಗಿಗಳು ಮಂಗಳೂರಿಗೆ ಅವಲಂಬಿತರಾಗಿದ್ದರು.ಆದರೆ ಕೋರನಾ ಸಾಂಕ್ರಾಮಿಕ ರೋಗದಿಂದಾಗಿ ಮಂಗಳೂರಿನ ಜಿಲ್ಲಾಡಳಿತವು ಹಾಗೂ ಮಂಗಳೂರಿನ ಲೋಕಸಭಾ ಸದಸ್ಯರು,ಸ್ಥಳೀಯ ಸದಸ್ಯರು ಮತ್ತು ಸ್ಥಳೀಯರ ವಿರೋಧದಿಂದಾಗಿ ಕಾಸರಗೋಡಿನ ಕರೋನ ಹೊರತುಪಡಿಸಿದ ರೋಗಿಗಳು ಕೂಡ ಚಿಕಿತ್ಸೆ ಲಭಿಸದೆ ಹಲವಾರು ಮಂದಿ ಮರಣ ಹೊಂದಿರುವುದು ತುಂಬಾ ಖೇದ ಕರವಾದ ವಿಷಾದನೀಯ ವಿಷಯವಾಗಿತ್ತು .ಈ ವಿಷಯ ಕೂಡ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿರುವುದು ದೇಶದ ಸರ್ವರಿಗೂ ತಿಳಿಯ ತಕ್ಕ ವಿಷಯವಾಗಿತ್ತು .ಅದರಲ್ಲೂ ಕಾಸರಗೋಡಿನ ಕನ್ನಡಿಗರು ಒಂದು ಕಾಲದಲ್ಲಿ ಸಂಪೂರ್ಣವಾಗಿ ಮಂಗಳೂರನ್ನು ನೆಚ್ಚಿಕೊಂಡವರಾ ಗಿದ್ದರಿಗೆ ಈ ವಿಷಯವು ಅರಗಿಸಿಕೊಳ್ಳಲು ಕಷ್ಟದಾಯಕವಾಗಿತ್ತು .ಇದೆಲ್ಲವನ್ನು ಗಮನಿಸಿದ ಬಹಳ ದೂರದ ಭಾರತದ ನಂಬಿಕಸ್ಥ ಉದ್ಯಮವಾದ ಟಾಟಾ ಸಮೂಹ ಸಂಸ್ಥೆಯವರು ಕಾಸರಗೋಡಿನ ಸಮಸ್ತ ಜನತೆಗೆ ಕರೋನಾದ ಉಡುಗೊರೆಯನ್ನು ನೀಡಿರುತ್ತಾರೆ .ಇದರಿಂದಾಗಿ ಇನ್ನು ಮುಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯನ್ನು ನೆಚ್ಚಿಕೊಳ್ಳುವ ಅಗತ್ಯವಿರುವುದಿಲ್ಲ .ಇದಕ್ಕಾಗಿ ಚೆಮ್ನಾಡ್ ಪಂಚಾಯಿತಿಯಲ್ಲಿ ನಿವೇಶನ ಗುರುತಿಸಲಾಗಿದ್ದು ಅತಿ ತುರ್ತಾಗಿ ಮೂರು ತಿಂಗಳೊಳಗೆ ನಿರ್ಮಾಣ ಮಾಡಿ ಆಸ್ಪತ್ರೆಯನ್ನು ತೆರೆಯುವ ಯೋಚನೆ ಟಾಟಾ ಸಂಸ್ಥೆ ರಿಗಿರುತ್ತದೆ .ಆದರೆ ಕಾಸರಗೋಡಿನ ಜನತೆಯ ಸಮೀಪ ನೂತನವಾಗಿ ಕಾಸರಗೋಡು ವೈದ್ಯಕೀಯ ಕಾಲೇಜ ನಿರ್ಮಾಣಗೊಂಡಿದ್ದು ಸದ್ರಿ ವೈದ್ಯಕೀಯ ಕಾಲೇಜನ್ನೇ ಮತ್ತು ಆಸ್ಪತ್ರೆಯನ್ನು ಟಾಟಾ ಸಮೂಹ ಸಂಸ್ಥೆಯವರಿಗೆ ನಿರ್ವಹಿಸಲು ನೀಡಿದಲ್ಲಿ ಕೇರಳದ ಅತ್ಯಂತ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒಂದಾಗಿ ಹೊಂದುವುದರಲ್ಲಿ ಸಂಶಯವಿಲ್ಲವೆಂದು ಸ್ಥಳೀಯರು ನಂಬಿರುತ್ತಾರೆ .ಇದಕ್ಕಾಗಿ ಕಾಸರಗೋಡು ಜನತೆ ಕೋರನ ವನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾರೆ” ..?

