ಯಡೂರಪ್ಪರಲ್ಲಿ ವಾಜಪೇಯಿಯವರಲ್ಲಿದ್ದ ಬಿಜೆಪಿ ಗುಣ ಇದೆ
ಇದು ನಾನು ಜನವರಿ ತಿಂಗಳಲ್ಲಿ ಬರೆದ ಬ್ಲಾಗ್ ಇದನ್ನ ಮತ್ತೆ ಇಲ್ಲಿ ಪೋಸ್ಟ್ ಮಾಡಿದ್ದೇನೆ ಕಾರಣ "ಯಾವುದೋ ಒಂದೆರೆಡು ಘಟನೆ ಇಟ್ಟುಕೊ೦ಡು ಮುಸ್ಲಿಂ ಸಮುದಾಯದ ವಿರುದ್ದ ಕೆಟ್ಟದಾಗಿ ನಡೆದು ಕೊಂಡರೆ ಸುಮ್ಮನಿರುವುದಿಲ್ಲ'' ಎಂಬ ಅವರ ನಿನ್ನೆಯ ಹೇಳಿಕೆ ಇಡೀ ದೇಶದಲ್ಲೆ ಜನರ ಮೆಚ್ಚುಗೆಗೆ ಕಾರಣವಾಯಿತು.
ಅದೇ ರೀತಿ ಅವರದೇ ಪಕ್ಷದವರು ಬಿಜೆಪಿ ಸಂಸ್ಥಾನ ದಿನದ ಆಚರಣೆ ಸಂದಭ೯ದಲ್ಲಿ ಯಡೂರಪ್ಪನವರು ಬಿಜೆಪಿ ಸಿದ್ದಾ೦ತಕ್ಕೆ ವಿರುದ್ದವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆಂದು ಟ್ರೋಲ್ ಮಾಡುತ್ತಿದ್ದಾರೆ.
ಒಂದು ರಾಜ್ಯದ ಮುಖ್ಯಮಂತ್ರಿ ಆಗಿ ಎಲ್ಲಾ ಜಾತಿ ದಮ೯ದವರನ್ನ ಸರಿ ಸಮಾನವಾಗಿ ಸಕಾ೯ರದ ಸವಲತ್ತು ತಲುಪಿಸುವ ಮತ್ತು ಅವರ ವಿಶ್ವಾಸಗಳಿಸುವುದು ಅವರ ಜವಾಬ್ದಾರಿ ಅದರಲ್ಲೂ ಕೆರೋನಾ ವೈರಸ್ ನಂತ ಮಾರಕ ರೋಗ ಹರಡದಂತೆ ಜವಾಬ್ದಾರಿಯುತವಾಗಿ ಕೆಲಸ ಮಾಡುವ ಈ ಕಠಿಣ ಸಂದಭ೯ದಲ್ಲಿ ಅವರಿಗೆ ಎಲ್ಲ ದಮ೯ದವರ ಸಹಕಾರ ಬಹುಮುಖ್ಯ ಕೂಡ.
ಆದರೆ ಯಡೂರಪ್ಪನವರದ್ದು ಅಟಲ್ ಬಿಹಾರಿವಾಜಪೇಯಿಯವರಲ್ಲಿದ್ದOತಹದೇ ಬಿಜೆಪಿ ಮನಸು.
ಯಡೂರಪ್ಪ ಶಿವಮೊಗ್ಗ ಜಿಲ್ಲೆಯವರೆಂಬ ಹೆಮ್ಮೆ ನಮ್ಮೆಲ್ಲರಿಗೂ ಇದೇ ಕಾರಣದಿಂದ.

